ಕಾಗವಾಡ ಮತಕ್ಷೇತ್ರದ ಗಡಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸದಾ ಸಿದ್ಧ.

Share the Post Now

ವರದಿ’:ಸಚಿನ ಕಾಂಬ್ಳೆ. ಕಾಗವಾಡ



ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಜೂರ ಗ್ರಾಮದ ಹತ್ತಿರ ವಿರುವ ಗಡಿಯಲ್ಲಿ ಬ್ರಿಟಿಷರ ಕಾಲದ ಕೆನಾಲ್ ದ ಬ್ರಿಜ್ ದಲ್ಲಿ ಬಳ್ಳಾರಿ ಕಂಟಿಗಳು ಬೆಳೆದು ಹಾಗೂ ಮತ್ತಿತರರ ವಸ್ತುಗಳು ಬಿದ್ದು, ಬ್ರಿಜ್ ಸಂಪೂರ್ಣ ಬಂದುಬಿದ್ದಿದು ಇದನ್ನು ಮನಗಂಡು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಸ್ಥಳೀಯ ಮುಖಂಡರು ಹಾಗೂ ರೈತರೊಂದಿಗೆ ಸ್ವತ ಅವರೇ ಹಳಕ್ಕೆ ಭೇಟಿನಿಡಿ ವೀಕ್ಷಣೆ ಮಾಡಿ ಆ ಬ್ರಿಜ್ ವನ್ನು ಸ್ವಚ್ಛಗೊಳಿಸಿ ಕಾಲುವೆಯನ್ನು ಪುನರ ಆರಂಭಗೊಳಿಸುವುರಿಂದ ಸುತ್ತಮುತ್ತಲಿನ ಸುಮಾರು 5 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಆದ್ದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಲುವೆಯನ್ನು ಶೀಘ್ರದಲ್ಲಿ ರಿಪೇರಿ ಮಾಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು 3 ದಿನಗಳ ಹಿಂದೆ ಶಾಸಕರು ಹೇಳಿದರು, ಇಲ್ಲಿಯ ಗ್ರಾಮದ ರೈತರಿಗೆ ಕೊಟ್ಟ ಮಾತಿನಂತೆ ಇವತ್ತು ಕಾಲುವೆಯನ್ನು ರಿಪೇರಿಗೊಳಿಸುವ ಕಾರ್ಯಕ್ಕೆ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಮಯದಲ್ಲಿ ಶಾಸಕರು ಮಾತನಾಡಿ ನಮ್ಮ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆಜೂರ ಗ್ರಾಮದ ಗಡಿ ಭಾಗದಲ್ಲಿರುವ ಬ್ರಿಟಿಷರ ಕಾಲದ ಬ್ಯಾರೇಜ್ ಹಳ್ಳವು ಸಂಪೂರ್ಣ ಬಂದ ಬಿದ್ದಿದ್ದು, ಮೂರು ದಿನಗಳ ಹಿಂದೆ ಈ ಹಳ್ಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ, ಅಲ್ಲಿನ ರೈತರಿಗೆ ಶೀಘ್ರದಲ್ಲಿಯೇ ಈ ಯೋಜನೆಗೆ ಪುನರುಜ್ಜೀವನ ನೀಡಿ ಪುನರ್ ಆರಂಭಿಸಲಾಗುವುದೆಂದು ಹೇಳಿದ್ದೆವು, ಕೊಟ್ಟ ಮಾತಿನಂತೆ ಇವತ್ತು ಕಾಲುವಿಗೆ ಪುನರುಜ್ಜೀವನ ನೀಡಿ ಪುನರಾರಂಭಿಸುವ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದೆವು, ಈ ಭಾಗದ 4-5 ಗ್ರಾಮಗಳ ರೈತರಿಗೆ ಶೀಘ್ರವೇ ನೀರಾವರಿ ಒದಗಿಸುವ ನಿಟ್ಟಿನಲ್ಲಿ ನಮ್ಮ ಸ್ವಂತ ಹಣದಿಂದ ಈ ಕಾಮಗಾರಿಯನ್ನು ಪ್ರಾರಂಭಿಸಿ ಹದಿನೈದು ದಿನಗಳ ಒಳಗೆ ಈ ಕಾಲುವೆಯ ಸ್ವಚ್ಛತೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾನು ಸದಾ ಸಿದ್ಧನಿದ್ದೇನೆ ಎಂದರು.

ಈ ಸಮಯದಲ್ಲಿ ಸ್ಥಳೀಯ ರೈತ ಬಾಂಧವರು ಮಾತನಾಡಿ ನಮ್ಮ ಆಜೂರ ಗ್ರಾಮದ ಹತ್ತಿರ ಇರುವ ಬ್ರಿಟಿಷರ ಕಾಲದ ಕಾಲುವೆಯ ಬ್ರಿಜ್ ವಿದ್ದು ಈ ಕಾಲುವೆಯಲ್ಲಿ ಗಿಡ, ಕಂಟಿಗಳು ಬೆಳೆದು ಹಲವಾರು ವರ್ಷಗಳಿಂದ ಬಂದವಿರುವುದನ್ನು ಶಾಸಕರು ಮನಗಂಡು ಆ ಸ್ಥಳಕ್ಕೆ ಖುದ್ದಾಗಿ ಅವರೇ ಬೇಟಿ ನೀಡಿ, ಕಾಲುವೆಯನ್ನು ವೀಕ್ಷಿಸಿ, ಶೀಘ್ರದಲ್ಲಿಯೇ ಈ ಕಾಲುವೆಯನ್ನು ದುರಸ್ತಿಗೊಳಿಸಿ, ಪುನರ್ ಆರಂಭಗೊಳಿಸುವುರಿಂದ ಆ ಕಾಲುವೆಯಿಂದ ಸುಮಾರು 5 ಗ್ರಾಮಗಳಿಗೆ ನೀರಾವರಿ ಒದಗಿಸಿ ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಶಾಸಕರು ಫಣತೊಟ್ಟಿದ್ದು, ಶಾಸಕರು ಮೂರು ದಿನಗಳ ಹಿಂದೆ ಕೊಟ್ಟ ಮಾತಿನಂತೆ ಇವತ್ತು ಹಳ್ಳದ ಸ್ಥಳಕ್ಕೆ ಭೇಟಿನಿಡಿ ನಮ್ಮ ಭಾಗದ ರೈತರಿಗೆ ನೀರಾವರಿ ಅನುಕೂಲ ಕಲ್ಪಿಸಬೇಕೆಂಬುದನ್ನು ಮನಗಂಡು ಶಾಸಕರು ತಮ್ಮ ಸ್ವಂತ ಹಣದಿಂದ ಈ ಕಾಮಗಾರಿಯನ್ನು ಪ್ರಾರಂಭಿಸಿ 15 ದಿನಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಇಲ್ಲಿಯ ರೈತ ಬಾಂಧವರಿಗೆ ಈ ಕಾಲವೇ ಮುಖಾಂತರ ನೀರು ಹರಿಸಲಾಗುವುದೆಂದರು. ರೈತರ ಮೇಲಿರುವ ಕಾಳಜಿಗೆ 4-5 ಗ್ರಾಮದ ಸಮಸ್ತ ರೈತ ಬಾಂಧವರ ವತಿಯಿಂದ ಶಾಸಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಹಾಗೂ ಹಲವು ಗ್ರಾಮಗಳ ರೈತ ಬಾಂಧವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!