ಬೆಳಗಾವಿ
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಹಟ್ಟಿ ಪರಮ ಪೂಜ್ಯ ಶ್ರೊತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಶ್ರೀ ಶ್ರೀಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಷಣ್ಮೂಖಾರೂಢಮಠ ವಿಜಯಪುರ, ಶಾಂತಾಶ್ರಮ ಹುಬ್ಬಳ್ಳಿ ಇವರು ಧಾರ್ಮಿಕ ಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿದರು. ರಡ್ಡೆರಹಟ್ಟಿಯ ಬಸವೇಶ್ವರ ದೇವಸ್ಥಾನದ ಮಹಾದ್ವಾರದಿಂದಧಾರ್ಮಿಕ ಜಾಗೃತಿ ಪಾದಯಾತ್ರೆ ಮಾಡಿದರು ಅನಂತರ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಪ್ಪರಗಿಯ ಸಿದ್ದರೂಢ ಸ್ವಾಮೀಜಿಯವರ ಅಮೃತ ಹಸ್ತದಿಂದ ಪ್ರಾಣವ ಧ್ವಜವನ್ನು ಹರಿಸಿ. ಸಂಗೀತ ವಾದ್ಯ ದಿಂದ ಮೊದಲನೇ ದಿನದ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಿಶೇಷವಾಗಿ ಗ್ರಾಮದ ಯುವಕರು ಈ ಕಾರ್ಯಕಾಮಕ್ಕೆ ಕೈ ಜೋಡಿಸಿ ಮೊದಲನೇ ದಿನದ ಪ್ರವಚನ ಕಾರ್ಯಕ್ರಮ ಯಶಸ್ವಿ ಗೊಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಹಾಗೂ ತಾಲೂಕಿನ ಪ್ರಮುಖರಾದ ಬಸಪ್ಪಾ ಖೋತ, ಮಲ್ಲಪ್ಪ ಖೋತ, ಪಾಂಡು ಬೋಸಲೆ, ಬಾಬಣ್ಣ ಸಾರವಾಡ, ಸಹದೇವ ಅರಗೊಡ್ಡಿ ಮಹಾದೇವ ಗಲಗಲಿ ರಾಮಣ್ಣ ಚೋಗಲಾ, ಸಚಿನ ನಾಯಿಕ, ಮಂಜುನಾಥ ನಾಯಿಕ, ಗುರಾಬಾಸು ತಾವರಮನಿ, ಹಾಗೂ ತಾಲೂಕಿನ ಭಕ್ತದಿಗಳು ಭಾಗಿಯಾದಿದ್ದರೂ
