ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಪರ ಮತಯಾಚನೆ

Share the Post Now

ಹಳ್ಳೂರ : ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಅರಬಾಂವಿ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರ ಮತ ಯಾಚನೆಯನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಹಳ್ಳೂರ ಗ್ರಾಮದ ಎಲ್ಲಾ ವಾರ್ಡಗಳಿಗೆ ತೆರಳಿ ಗ್ರಾಮದ ಎಲ್ಲಾ ದೇವರ ದರ್ಶನ ಪಡೆದು ಮತಯಾಚಣೆಯನ್ನು ನೂರಾರು ಮತದಾರರ ಸಭೆ ಸೇರಿಸಿ ಭರ್ಜರಿಯಾಗಿ ಮತಯಾಚನೆ ಮಾಡಿದರು. ಹಳ್ಳೂರ ಗ್ರಾಮದ ಮತದಾರ ಬಂದುಗಳಿಗೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬಹಳ ಅವಿನಾಭಾವ ಸಂಬಂಧವಿದೆ.

ಜಾತಿ ಭೇದ ವಿಲ್ಲದೆ ಒಂದೇ ಕುಟುಂಬದಂತೆ ಇದ್ದು ಎಲ್ಲರ ಜೊತೆ ಪ್ರೀತಿ ವಾತ್ಸಲ್ಯ ತೋರಿ ಅನೇಕ ಅಭಿವೃದ್ಧಿ ಕಾರ್ಯವನ್ನು ಮಾಡಿದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅತ್ಯಮೂಲ್ಯವಾದ ಮತವನ್ನು ಬಿ ಜೆ ಪಿ ಗೆ ಹಾಕಿ ರಾಜ್ಯದಲ್ಲಿಯೇ ಅರಬಾಂವಿ ಮತಕ್ಷೇತ್ರದಲ್ಲಿ ಹೆಚ್ಚು ಮತ ಪಡೆದು ದಾಖಲೆ ಸೃಷ್ಟಿಸಿ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲು ಮತ ಹಾಕಿ ಬೇರೆಯವರಿಗೆ ಹೇಳಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಧಾನ ಸಭೆಗೆ 6 ನೇ ಬಾರಿಗೆ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಮತ್ತೊಮ್ಮೆ ಸೇವೆ ಮಾಡಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡಲು ಅವಕಾಶ ಮಾಡಿಕೊಡಬೇಕು. ಈ ಬಾಗದಲ್ಲಿ ನೀರಾವರಿ ಸೌಕರ್ಯ ಹಿಡಿದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಮತ್ತೆ ಬೇರೆ ನಿಮ್ಮ ಕೆಲಸ ಕಾರ್ಯವಾಗಬೇಕಾಗಿದ್ದರೆ ಏನ್ ಎಸ್ ಎಫ್ ಕಛೇರಿ ಸೇವೆ ಮಾಡಲು ಸದಾಕಾಲ ಸಿದ್ದವಿದೆ ಎಂದು ಹೇಳಿದರು. ಈ ಸಮಯದಲ್ಲಿ ಗ್ರಾಮದ 9 ವಾರ್ಡದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು, ಮಹಿಳಾ ಸಂಘದವರು ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ, ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!