ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆ ಹಾಗೂ ಎಸಬಿಜಿ ಗ್ರೂಪ್ ಹಮ್ಮಿಕೊಂಡಿದ್ದ ಮೂರು ದಿನಗಳ ಆಹಾರ ಮೇಳ, ಸಂತೆ ಮೇಳ ಹಾಗೂ ಎಸಬಿಜಿ ಅವಾರ್ಡ್ಸ ಕಾರ್ಯಕ್ರಮದ ಎರಡನೇಯ ದಿನ ಅಜಿತ್ ಬಾನೆ ಶಾಲೆ ಹಾಗೂ ಹೊಸ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ ಸಂತೆ ಮೇಳ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಹಮೀದ್ದೀನ ರೋಹಿಲೆ ಶಾಲೆಯಲ್ಲಿ ಕೇವಲ ಆಟ ಪಾಠವನ್ನು ಹೇಳುವುದರಿಂದ ಜೀವನ ಕಟ್ಟಿಕೊಳ್ಳಲು ಆಗದು ಇವತ್ತಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ರೂಪಿಸಿಕೊಳ್ಳಲು ಮಕ್ಕಳಲ್ಲಿ ಶಾಲಾ ದಿನಗಳಲ್ಲಿಯೇ ಆಟ, ಪಾಠದ ಜೊತೆಗೆ ಸಂತೆಯಂತಹ ವಿವಿಧ ರೀತಿಯ ವ್ಯವಹಾರ ಜ್ಞಾನವನ್ನು ನೀಡುವ ಚಟುವಟಿಕೆಗಳನ್ನು ಆಯೋಜಿಸುವುದು ಅತಿ ಅವಶ್ಯವಾಗಿದೆ ಎಂದರು.

ವೇದಿಕೆ ಕಾರ್ಯಕ್ರಮವನ್ನು ಸಾಂಸ್ಕೃತಿಕ ದೀಪ ಪ್ರಜ್ವಲಿಸುವ ಮೂಲಕ ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ ಗಣ್ಯರು ಚಾಲನೆ ನೀಡಿದರು.
ಸಂತೆಮೇಳವನ್ನು ಉಪ ತಹಶೀಲ್ದಾರ್ ಎಸ್.ಜಿ.ದೊಡಮನಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಗಣ್ಯರೊಂದಿಗೆ ಸುಮಾರು ಐವತ್ತಕ್ಕೂ ಹೆಚ್ಚು ಸ್ಟಾಲಗಳಲ್ಲಿ ವಿವಿಧ ತರಕಾರಿ, ಪಲ್ಲೆಗಳು, ತಿಂಡಿ ತಿನಿಸುಗಳು, ಹಣ್ಣು ಹಂಪಲುಗಳನ್ನು, ಸಾವಯವ ಪದಾರ್ಥಗಳನ್ನು ಮಳಿಗೆಗಳಿಗೆ ಭೇಟಿ ನೀಡಿ ಕೆಲ ಪದಾರ್ಥಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರು.
ಈ ಒಂದು ಸಂತೆ ಮೇಳದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ತಮ್ಮದೇಯಾದ ವ್ಯಾಪಾರ ವ್ಯವಹಾರಗಳಲ್ಲಿ ಮಗ್ನರಾಗಿ ಸಂತೆಯ ಅನುಭವ ಪಡೆದರು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಮ.ಎನ.ದಾನಣ್ಣವರ ಅಧ್ಯಕ್ಷತೆ ವಹಿಸಿದ್ದರು, ಶಾಲಾ ಉಸ್ತುವಾರಿ ಬಾಬಾಲಾಲ ಪಿನಿತೋಡ, ಡಾ. ಲಕ್ಷ್ಮಣ ಚೌರಿ, ಪುರಸಭೆ ಸದಸ್ಯ ಸಾದೀಕ ರೋಹಿಲೆ, ಅಬ್ದುಲಖಾದರ ರೋಹಿಲೆ, ಬಾಬಾಜಾನ ಕಾಲೆಮುಂಡಾಸೆ, ಎ.ಎಸ.ಕಾಂಬಳೆ, ಎ.ಎಸ.ಪಾಟೀಲ, ಎ.ಎಸ.ಟೊಣ್ಣೆ, ಆಶಾ ಗಾಡಿವಡ್ಡರ, ನೇಮಿನಾಥ ಖವಟಕೊಪ್ಪ ಇತರರು ಭಾಗಿಯಾಗಿದ್ದರು.