ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ತಮ್ಮಣ್ಣವರ ಚಾಲನೆ ನೀಡಿದರು
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮತಕ್ಷೇತ್ರದ ಅಳಗವಾಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಾಲಶಿರಗೂರದ ಪಿ.ಬಿ.ಭಾವಿ ಸರ್ಕಾರಿ ಪ್ರೌಢಶಾಲೆಗೆ ತಲಾ ಐದು ಲಕ್ಷ ಅನುದಾನದಲ್ಲಿ ಶೌಚಾಲಯ ನಿರ್ಮಾಣ, ಯಲ್ಪಾರಟ್ಟಿ ಗ್ರಾಮ ಪಂಚಾಯತ ಹತ್ತಿರ ರೂ. ಐದು ಲಕ್ಷ ಮೊತ್ತದ ಶೌಚಾಲಯ ನಿರ್ಮಾಣ ಹಾಗೂ ಹಾರೂಗೇರಿ ಕ್ರಾಸನಲ್ಲಿ ಹತ್ತು ಲಕ್ಷ ಮೊತ್ತದ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿ ಪೂಜೆ ನೆರವೇರಿಸಿದರು.

ನಂತರ ಹಾರೂಗೇರಿ ಕ್ರಾಸ್ನ ಬಸ್ ನಿಲ್ದಾಣ ಹತ್ತಿರದ ಚರಂಡಿ ಇಲ್ಲದೆ ಕಸ ಶೇಖರಣೆಯಿಂದ ಸೊಳ್ಳೆ ಕಾಟ ಹೆಚ್ಚಾಗಿರುವ ಕುರಿತು ಸಾರ್ವಜನಿಕರು ಸಮಸ್ಯೆ ತೊಡಿಕೊಂಡಾಗ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಚ್ಛಗೊಳಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಭಾರತಿ ಕಾಂಬಳೆ, ಸದಾಶಿವ ದಳವಾಯಿ, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಕಾಂತ್ ಮೂಡಸಿ ಶ್ರೀಶೈಲ್ ಮೂಡಸಿ ಬಾಳೆಶ್ ಹಾಡಕರ ನಾರಾಯಣ ಹಾಡಕರ ಸುಕುಮಾರ ಸವದತ್ತಿ ರಾಜು ಮೂಡಸಿ ಶರಾವತಿ ನಿಡಸೋಸಿ ದ್ರಾಕ್ಷಾಯಣಿ ಸರಿಕರ ಜಯಶ್ರೀ ಚೌಗಲಾ ಶಂಕರ್ ದಳವಾಯಿ, ಶಿವಲಾಲ ಭಂಡಗಾರ, ಎಸಡಿಎಮಸಿ ಅಧ್ಯಕ್ಷ ಶಂಕರ್ ದಳವಾಯಿ, ನೀಲಪ್ಪ ಕಾಂಬಳೆ, ಗುತ್ತಿಗೆದಾರರಾದ ಪಿ.ಬಿ.ಬಸ್ತವಾಡೆ,ರಾಜು ಲಾಡ್, ಸಚಿನ್ ಹಳಕಲ,ವರ್ಧಮಾನ್ ಶಿರಹಟ್ಟಿ, , ಭಾವಿ ಬಂಧುಗಳು ಇತರರು ಉಪಸ್ಥಿತರಿದ್ದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ