ಮುಗಳಖೋಡ ಪಟ್ಟಣದಲ್ಲಿ 40 ನೇ  ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು

Share the Post Now


ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಸಿದ್ದಶ್ರೀ ಸೌಹಾರ್ದ ಸಹಕಾರಿ ಸಂಘದ ಸಭಾ ಭವನದಲ್ಲಿ  ಇದೆ ನವೆಂಬರ್ 30 ರಂದು ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಮುಕ್ತಿ ಮಠದಲ್ಲಿ ನಡೆಯಲಿರುವ ಶ್ರೀ ಷಡಕ್ಷರಿ ಶಿವಜೋಗಿ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು 40ನೇಯ ಗುರುವಂದನಾ ಕಾರ್ಯಕ್ರಮದ ಪೂರ್ವಬಾವಿ ಸಭೆ ಜರುಗಿತು

ಈ ಸಭೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಜೋತೆಗೆ ರಾಯಬಾಗ ತಾಲೂಕ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಈ  ಗುರುವಂದನಾ ಕಾರ್ಯಕ್ರಮ ದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಅಚ್ಚು ಕಟ್ಟು ಕಾರ್ಯ ನಿರ್ವಹಣೆ ಗೇ ಶಾಸಕರು ಸೂಚಿಸಿದರು,

ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮುರಾಘರಾಜೇಂದ್ರ ಮಹಾಸ್ವಾಮಿಗಳು   ಮಾನ್ಯ ಕುಡಚಿ ಶಾಸಕರ ನೇತೃತ್ವದಲ್ಲಿ ತಾಲೂಕ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು  ಕರೆದು ಈ ಕಾರ್ಯಕ್ರಮ ಯಶಸ್ವಿಯಾಗಲು ತಾಲೂಕ ಆಡಳಿತ ದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ



ಇದೆ ನವೆಂಬರ್ 30ರಿಂದ  ಡಿಸೇಂಬರ್ 2ವರೆಗೆ ಮೂರು ದಿನಗಳ  ಕಾಲ ಗುರುವಂದನಾ ಕಾರ್ಯಕ್ರಮಅದ್ದೂರಿಯಾಗಿ ಜರುಗುದು


ನವೆಂಬರ್ 30ರಂದು ದೇಶ ಕಾಯುವ ಯೋಧರಿಗೆ ಶ್ರೀಮಠದ ಭಕ್ತರಸಮ್ಮುಖದಲ್ಲಿ ರಕ್ತದಾನ ಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ
ಡಿಸೇಂಬರ್ 1ರಂದು 30ಸಾವಿರಕ್ಕೂ ಅಧಿಕ  ರೈತ ಬಾಂದವರನ್ನು ವಂದೇ ವೇದಿಕೆ ಮೇಲೆ ಕುರಿಸಿ ಸತ್ಕರಿಸಿ ರೈತರಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪರುಷ್ಟಿ ಮಾಡಲಾಗುವದು ನಂತರ ಸಾಯಂಕಾಲ ಶ್ರೀ ಮಠದಲ್ಲಿ ವಿವಿಧ ರಾಜ್ಯದ ಭಕ್ತರ ಸಮ್ಮುಖದಲ್ಲಿ 400ಅಧಿಕ  ತುಲಾಬಾರ ಸೇವೆಯನ್ನು ಮಾಡಲಿದ್ದಾರೆ ಕಾರ್ಯಕ್ರಮದ ಕೊನೆಯ ದಿನವಾದ ಡಿಸೇಂಬರ್ 2ರಂದು ಸಾಯಂಕಾಲ  ಭವ್ಯ ವೇದಿಕೆ ಮೇಲೆ ರಾಜ್ಯದಿಂದ ಹಲವಾರು ಸಂಸ್ಕೃತಿಕ ಕಲಾ ತಂಡಗಳು ತಮ್ಮ  ಕಲೆಯನ್ನು ಪ್ರದರ್ಶಿಸಲು ಆಗಮಿಸುತ್ತಿದ್ದಾರೆ ಹೀಗೆ ಹಲವಾರು ಕಾರ್ಯಕ್ರಮಗಳು ಜರುಗಲಿದ್ದು ನಾಡಿನ  ಸಮಸ್ತ ಜನತೆಗೆ ಹಾಗೂ ಶ್ರೀ ಮಠದ  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶ್ರೀ ಗಳು ಹೇಳಿದರು

ಈ ಸಂದರ್ಭದಲ್ಲಿ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಗಣ್ಯರು ಉಪಸ್ಥಿತರಿದ್ದರು

ವರದಿ :ಕೆ ಎಸ್. ಕಾಂಬಳೆ

Leave a Comment

Your email address will not be published. Required fields are marked *

error: Content is protected !!