ಬೆಳಗಾವಿ.ಹಳ್ಳೂರ.
ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುವ ಸಲುವಾಗಿ ಹಿಂದೆ ಪೂಜೆ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರು. ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡುವದರಿಂದ ದನ ಕರುಗಳಿಗೆ,ಮನುಷ್ಯರಿಗೆ ರೋಗ ರುಜಿನಗಳು ಬರುವದಿಲ್ಲ ಮತ್ತು ಮಳೆ ಬೆಳೆ ಚೆನ್ನಾಗಿ ಆಗಿ ಸುಖಃ ಶಾಂತಿ ನೆಮ್ಮದಿ ದೊರೆಯುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 14 ವರ್ಷಗಳಿಂದ ಪೂಜಿ ದಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ವಾಡಿಕೆಯಿದೆ. ಎಂದು ಜಿಲ್ಲಾ ನಿರ್ದೇಶಕರಾದ ನಾಗರತ್ನಾ ಹೆಗಡೆ ಹೇಳಿದರು.
ಅವರು ಕಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಡಲಗಿ ರೂರಲ್ ವಲಯದ ಸಂಯುಕ್ತಾಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಪೂಜಾ ದಾರ್ಮಿಕ ಕಾರ್ಯಗಳನ್ನು ಭಕ್ತಿಯಿಂದ ಪೂಜಿಸಿ ದ್ಯಾನಿಸಿದರೆ ಸಕಲ ಸೌಭಾಗ್ಯ ದೊರೆಯುತ್ತವೆ. ಆರ್ಥಿಕ ಅಭಿವೃದ್ಧಿ ಹೊಂದುವ ಸಲುವಾಗಿ ಧರ್ಮಸ್ಥಳದ ಸಂಸ್ಥೆ ಬ್ಯಾಂಕಿನ ಮೂಲಕ ಹಣದ ಸಹಾಯ ಮಾಡುತ್ತಿದೆ.ಆರ್ಥಿಕ ಗುಣಮಟ್ಟ ಬಡತನ ನಿರ್ಮೂಲನೆ ಮಾಡುವುದು ಉದ್ದೇಶವಾಗಿದೆ. ನಿರ್ಗತಿಕರಿಗೆ, ವಯೋವೃದ್ಧರಿಗೆ, ಅಂಗವಿಕಲರಿಗೆ, ಮಾಸಿಕ ವೇತನ ,ಬಡಮಕ್ಕಳಿಗೇ ಉನ್ನತ ಮಟ್ಟದ ಶಿಕ್ಷಣ ಕಲಿಯಲು ಸುಜ್ಞಾನ ನಿಧಿ, ವಾತ್ಸಲ್ಯ ಕಾರ್ಯಕ್ರಮ ಕೆರೆಗಳ ಪುನಶ್ಚೇತನ ಕಾಮಗಾರಿ, ಹೈನುಗಾರಿಕೆ ಹೀಗೆ ಹಲವಾರು ಯೋಜಗಳು ಇವೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.
ಸಂಸ್ಥೆಯಲ್ಲಿ ಜಾತಿ ಭೇದವಿಲ್ಲ ಕಾರ್ಯಕರ್ತರು ಸ್ವಾರ್ಥ ಬಾವನೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿರಿ ಸದಸ್ಯರೂ ಕೂಡಾ ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಬೇಕು .ರಾಜ್ಯದಲ್ಲಿ 54 ಲಕ್ಷ ಜನ ಸಂಸ್ಥೆಯಲ್ಲಿ ಸದಸ್ಯರಿದ್ದಾರೆ. ಸಾಲ ತಗೊಂಡವರು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಬೇಕು ತಗೊಂಡು ಊರು ಬಿಟ್ಟು ಬೇರೆ ಕಡೆ ಹೋಗಬಾರದು.ಸದಸ್ಯರೂ ವಾರದ ಸಭೆ ನಡೆಸಿ ಸದಸ್ಯರು ನಿಮ್ಮ ಆಧಾರ ಕಾರ್ಡ್ ಮೇಲೆ ಬೇರೆಯವರಿಗೆ ಹಣ ಕೊಡಬೇಡಿ ಹಣ ತಗೊಂಡು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕ ಗುಣಮಟ್ಟ ಹೆಚ್ಚಿಸಿಕೊಳ್ಳಿ ಸಾರ್ವಜನಿಕರು ಸದಸ್ಯರಿಗೆ ಸಹಕಾರ ನೀಡಬೇಕು ಎಲ್ಲರೂ ಒಗ್ಗಟ್ಟಾಗಿ ಸಂಸ್ಥೆಯನ್ನು ಉಳಿಸಿ ಉನ್ನತ ಮಟ್ಟಕ್ಕೆ ಬೆಳೆಸುವ ಕಾರ್ಯ ಮಾಡಿದರೆ ಒಳ್ಳೆಯದೂ ಎಂದು ಹೇಳಿದರು.
ಮಹಾಲಿಂಗಯ್ಯ ಪೂಜೇರಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದಿದ್ದು ಗ್ರಾಮಕ್ಕೆ ಒಳ್ಳೆಯದೂ ನಾವೆಲ್ಲಾರು ಈ ಸಭೆಯಲ್ಲಿ ಕೂಡಿದ್ದು ಪುಣ್ಯವಂತರು ಎಂದು ಹೇಳಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ತುಪ್ಪದ.ಉಪಾದ್ಯಕ್ಷ ಚೇತನ ರಡೇರಟ್ಟಿ.ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಶಿವನಪ್ಪ ತುಪ್ಪದ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಸರ್ವ ಸದಸ್ಯರಿದ್ದು ಕಾರ್ಯಕ್ರಮವನ್ನು ಲಕ್ಷ್ಮೀ ಮದರಖಂಡಿ ಸ್ವಾಗತಿಸಿ. ಶಂಕರ ಡೋಣಿ ನಿರೂಪಿಸಿ ,ವಂದಿಸಿದರು.