ಬೆಳಗಾವಿ,ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಸಂಚಾಲಕರು ಎಲ್ಲರ ಅಚ್ಚುಮೆಚ್ಚಿನ ಚಾಚಾ ಎಂದೆ ಖ್ಯಾತಿ ಹೊಂದಿರುವ ಬಾಬಾಲಾಲ ಸಾಹೇಬಲಾಲ ಪಿನಿತೋಡ(52) ಶುಕ್ರವಾರ ಬೆಳಗ್ಗೆ 11.30ಕ್ಕೆ ನಿಧನ ಹೊಂದಿದ್ದಾರೆ.
ಅವರಿಗೆ ಸೋಮವಾರ ಮಧ್ಯಾಹ್ನ ಮೆದುಳಿನ ಸಮಸ್ಯೆ ಕಂಡು ಬಂದಾಗ ಕೂಡಲೇ ಮಿರಜದ ಜೋಶಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.
ಮೃತರು ಪತ್ನಿ, ಮೂರು ಗಂಡು ಮಕ್ಕಳು, ತಂದೆ ತಾಯಿ ಹಾಗೂ ಅಪಾರ ಶಿಕ್ಷಕ, ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ.
