ವರದಿ: ಸಂಜೀವ ಬ್ಯಾಕುಡೆ,
ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ 33/11ಕೆವಿ ಎಮಯುಎಸ.ಎಸ. ಚಿಂಚಲಿ ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ್ ಪರಿವರ್ತಕ ಮೆಂಟೆನೆನ್ಸ ಕೈಗೊಳ್ಳುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಚಯತ್ಯಯ ವಾಗಲಿದ್ದು ರೈತರು ಗ್ರಾಹಕರು ಸಹಕರಿಸುವಂತೆ ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಂಚಲಿ ವಿದ್ಯುತ್ ವಿತರಣಾ ಕೇಂದ್ರದ ಎಫ6 ಹಳೆ ಬೆಕ್ಕೇರಿ, ಎಫ3 ಹೊಸ ಬೆಕ್ಕೇರಿ, ಎಫ1 ರಾಯಬಾಗ ರಸ್ತೆ, ಎಫ5 ಬಾದಾಮಿಕೋಡಿ ಎಫ4 ಉಪ್ಪಾರಕೋಡಿ ಎಫ10 ಕುಡಚಿ ರಸ್ತೆ ಪ್ರದೇಶಗಳಲ್ಲಿ ರವಿವಾರ ಮಧ್ಯಾಹ್ನ 12ಗಂಟೆಯಿಂದ ಸೋಮವಾರ ಸಂಜೆ 6ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ರೈತರು ಗ್ರಾಹಕರು ಸಹಕರಿಸುವಂತೆ ಚಿಂಚಲಿ ಶಾಖಾಧಿಕಾರಿ ರಮೇಶ ಬಾದವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.