ಯುವ ಪೀಳಿಗೆ ಧರ್ಮದ ದಾರಿಯಲ್ಲಿ ಸಾಗಿರಿ ರಾಮಣ್ಣ ಮಹಾರಾಜರು

Share the Post Now

     ಬೆಳಗಾವಿ.    ಹಳ್ಳೂರ .

ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಸನ್ಮಾರ್ಗ ತೋರಿಸಿ ಕೊಡುವುದೇ ಪಾರಮಾರ್ಥ ಉದ್ದೇಶವಾಗಿದೆ ಇಂಚಗೇರಿ ಶ್ರೇಷ್ಠ ಸಾಂಪ್ರದಾಯದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ರಾಮಣ್ಣ ಮಹಾರಾಜರು ಹೇಳಿದರು.     

      ಗ್ರಾಮದ ಮಲ್ಲಪ್ಪ ಹೊಸಮನಿ ಮಹಾರಾಜರ 34 ನೇ ಪುಣ್ಯತಿಥಿ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣವರು 19 ನೇ ಶತಮಾನದ ಮಾಧವಾನಂದ ದೇವರು  ಪ್ರಪಂಚ ಮಾಡಿ ಪಾರಮಾರ್ಥ ಗೆಲ್ಲಬೇಕೆಂದು ಹೇಳಿದ್ದಾರೆ. ಮಹಾತ್ಮರು ಹೇಳಿದ ಮಾತುಗಳನ್ನು ಕಾಲ ಕಾಲಕ್ಕೂ ವಂಶ ಪರಂಪರವಾಗಿ ಅಳವಡಿಸಿಕ್ಕೊಂಡು ಹೋಗಬೇಕು ತಂದೆ ತಾಯಿಯರಲ್ಲಿ ಸಂಸ್ಕಾರವಿದ್ದರೆ ಮಕ್ಕಳಲ್ಲಿ ಬೆಳೆಯುತ್ತದೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ ಪಾರಮಾರ್ಥದ ದಾರಿ ಹಿಡಿಸಬೇಕು.  ಕಾಯಕ ಜೊತೆಗೆ ಯಡಬಿಡದೆ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರೆ ಪಾಪ ಕರ್ಮ ನಾಶವಾಗಿ  ಪುಣ್ಯ ಲಭಿಸುತ್ತದೆ.

ಕಲಿಯುಗದಲ್ಲಿ ಹೆಣ್ಣು ಗಂಡು ಅನ್ನೋದು ತಿಳಿತಾ ಇಲ್ಲ  ತಂದೆ ತಾಯಿ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು ಅವರ ನಡೆ ನುಡಿಗಳ ಬಗ್ಗೆ ಗಮನ ಹರಿಸಿ ಸನ್ಮಾರ್ಗ  ತಂದೆ ತಾಯಿ ಒಳ್ಳೆಯವರಾಗಿದ್ದರೆ ಮಕ್ಕಳು ಒಳ್ಳೆಯವರಗುರುತ್ತಾರೆ ಮಾಡಿದ ಭಕ್ತಿಗೆ ದೇವರು ಒಲೆಯುತ್ತಾನೆಂದು ಹೇಳಿದರು.     ಡಾ ಸಂಗಮೇಶ ಹಿಡಕಲ್. ಕದ್ದಿಮನಿ ಮಹಾರಾಜರು ಪ್ರವಚನ ಹೇಳಿದರು.ಲಕ್ಷ್ಮಣ ಹೊಸಮನಿ.ಗಿರಮಲ್ಲ ಸಂತಿ. ದುಂಡಪ್ಪ ಕತ್ತಿ. ಸುರೇಶ ಕತ್ತಿ. ಶಿವಾನಂದ ಹೊಸಮನಿ. ಸಂಗಪ್ಪ ದುರದುಂಡಿ. ಡಾ ವಿಶ್ವನಾಥ ಜಂಗಮ.ಬಿ ಬಿ ಕೌಜಲಗಿ. ಮುರಿಗೆಪ್ಪ ಮಾಲಗಾರ.ಡಾ ಶ್ರೀಮಂತ ಹೊಸತೋಟ.ಬಸವರಾಜ ಹೊಸಮನಿ.ಶಿವಾನಂದ ಚೌಗಲಾ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!