ಬೆಳಗಾವಿ. ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕೇಂದ್ರ ಕುಡಚಿ ವ್ಯಾಪ್ತಿಯಲ್ಲಿ ಮೌಂಟ್ ಅಬುವಿನಿಂದ ನಶಾಮುಕ್ತ ಭಾರತವನ್ನು ಮಾಡುವ ಉದ್ದೇಶದಿಂದ ಮೇರಾ ದೇಶ ಸ್ವರ್ಣಿಮ ಭಾರತ ಮೇರಾ ದೇಶ ನಶಾಮುಕ್ತ ಭಾರತ ಎಂಬ ಘೋಷವಾಕ್ಯದೊಂದಿಗೆ ವಿವಿಧೆಡೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರ ಈ ನಶಾ ಮುಕ್ತ ಭಾರತ ಅಭಿಯಾನಕ್ಕೆ ಕುಡಚಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ವಿದ್ಯಾ ಅಕ್ಕನವರು ನಶಾ ಮುಕ್ತ ಭಾರತ ಅಭಿಯಾನದ ಎಲ.ಇ.ಡಿ ವಾಹನಕ್ಕೆ ನೀಡಿದರು.
ಡಿ.ಬಿ.ದರೂರೆ, ಸುಟ್ಟಟ್ಟಿ ಕ್ರಾಸನ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಅಜೀತ ಬಾನೆ ಶಾಲೆ ಹಾಗೂ ಕುಡಚಿ ಪಟ್ಟಣದ ವಿವಿಧೆಡೆ ಅಭಿಯಾನ ನಡೆಸಿದರು.
ನಂತರ ಮಾತನಾಡಿದ ಡಾ.ಮಂಜುಷಾ ಅಕ್ಕನವರು ತಂಬಾಕು, ಹೆಂಡ, ದೂಮ್ರಪಾನ ಅಲ್ಲದೆ ಕೆಟ್ಟ ಆಲೋಚನೆಗಳು, ದೂರಾಸೆಗಳು, ನಮ್ಮ ನಿತ್ಯದ ಚಟುವಟಿಕೆಗಳಲ್ಲಿಯೂ ನಾವು ಬೇಜವಾಬ್ದಾರಿತನದಿಂದ ಸಂತೋಷದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಏಳಿ ಎದ್ದೇಳಿ ನಶಾ ಜೀವನ ಕುಂಭಕರ್ಣ ನಿದ್ರೆಯಿಂದ ಎದ್ದೇಳಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ನಿತ್ಯ ಬಂದು ನಶಾ ಮುಕ್ತ ಜೀವನ ಉತ್ತಮ ಜೀವನ ಶೈಲಿಯ ಬದುಕು ಸಾಗಿಸುವಂತೆ ಬಿ.ಕೆ. ಪಾರ್ವತಿ ಅಕ್ಕನವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಶೈಲ ದರೂರೆ, ಜಯಕುಮಾರ್ ಸನದಿ, ಬಿ.ಕೆ.ಸುಜಾತಾ ಬುಸಗುಂಡೆ, ಮೌಂಟ್ ಅಬುವಿನಿಂದ ಬಂದ ಬಿಕೆಗಳು ಉಪಸ್ಥಿತರಿದ್ದರು.