ವಿವಿಧತೆಯಲ್ಲಿ ಏಕತೆಯ ದೇಶ ನಮ್ಮ ಭಾರತ ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ

Share the Post Now


ಬೆಳಗಾವಿ.ಕುಡಚಿ:
ನಮ್ಮ ದೇಶದ ಸಂವಿಧಾನ ಜಾರಿಗೆ ಬರಲು 2ವರ್ಷ 11ತಿಂಗಳು 18 ದಿನಗಳನ್ನು ತೆಗೆದುಕೊಂಡ ಸರಳ ಹಾಗೂ ಜಟೀಲ ಗುಣಗಳನ್ನು ಹೊಂದಿದೆ. ಇಲ್ಲಿ ಅನೇಕ ಧರ್ಮಗಳು, ಜಾತಿಗಳು, ಭಾಷೇಗಳಿದ್ದರು ಯಾವದೇ ಜಾತಿ ಮತ ಪಂತಗಳೆನ್ನದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರುವ ವಿವಿಧತೆಯಲ್ಲಿ ಏಕತೆ ಸಾರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಎಂದು ಹೇಳಿದರು.

ಅವರು ಕುಡಚಿ ಪಟ್ಟಣದ ಜುನ್ನೇದಿಯಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ವೇದಿಕೆ ಹಂಚಿಕೊಂಡು ಮಾತನಾಡಿ ಹಿರಿಯರ ತ್ಯಾಗ ಬಲಿದಾನದ ಫಲವಾಗಿ ದೊರೆತ ಸ್ವಾಂತ್ರ್ಯವನ್ನು ನಮ್ಮ ಸ್ಟೇಚ್ಚಾರಕ್ಕೆ ಬಳಸಿಕೊಳ್ಳದೇ ಬಲಿಷ್ಠ ಭಾರತವನ್ನು ನಿರ್ಮಿಸೋಣ  ಸ್ವಾತಂತ್ರ್ಯ ದೊರಕಿದ ನಂತರ ದೇಶದಲ್ಲಿ ಸುಭದ್ರವಾದ ಆಡಳಿತ ನಡೆಸುವದಕ್ಕಾಗಿ ಸಂವಿಧಾನವನ್ನು ರಚಿಸಿದರು ನಾವು ಸುಭದ್ರವಾಗಿರಲು ಸಾದ್ಯವಾಯಿತು. ಎಲ್ಲರೂ ದೇಶ ಭಕ್ತರಾಗಬೇಕು ದೇಶಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಬೇಕು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ನಮ್ಮ ದೇಶದಲ್ಲಿ ಸ್ವಚ್ಚತೆಯ ಕೊರತೆಯಿಂದ ವಾತಾವರಣ ಹಾಳಾಗುತ್ತಿದೆ. ಎಲ್ಲರೂ ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಿ ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣ ನಿರ್ಮಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಉಪ ತಹಶೀಲ್ದಾರ ಎಸ.ಜಿ.ದೊಡಮನಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿದರು, ನಂತರ ಶಾಲಾ ಮಕ್ಕಳಿಂದ ರಾಷ್ಟ್ರ ಗೀತೆ, ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ನಂತರ ಜುನ್ನೇದಿಯಾ ಶಾಲೆ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಂದ ಮಾಸ್ಟಪಾಶ ನಡೆಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಎಸ.ಎಚ.ಪೆಟ್ರೋಲಿಯಮ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕುಡಚಿ ಪಟ್ಟಣಕ್ಕೆ ಹೆಸರು ತಂದ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು, ನಂತರ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿದವು, ಶಿಸ್ತು ನಿರ್ವಹಣೆಯಲ್ಲಿ ಸರ್ಕಾರಿ ಉರ್ದು ಪ್ರೌಢಶಾಲೆ ಪ್ರಥಮ, ಅಜೀತ ಬಾನೆ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಜುನ್ನೇದಿಯಾ ಹಿರಿಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದ ಶಾಲೆಗಳಿಗೆ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ 12ಗಂಟೆ ವರೆಗೂ ಮಕ್ಕಳು ಸುಡು ಸುಡು ಬಿಸಿಲಿನಲ್ಲಿ ಕೂಡ ಬೇಕಾಯಿತು, ವೇದಿಕೆ ಕಾರ್ಯಕ್ರಮ ಮುಗಿದ ಮೇಲೆ ಉಪ ತಹಶೀಲ್ದಾರ್ ಸೇರೀದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ತೆರಳಿದ್ದರಿಂದ ಮಕ್ಕಳ ಮನೋರಂಜನೆ ಕಾರ್ಯಕ್ರಮ ನಾವೆ ಮಾಡಿ ನಾವೆ ನೋಡಬೇಕಾ ಎಂದು ವಿದ್ಯಾರ್ಥಿಗಳ ಪಾಲಕರು,  ಸಾರ್ವಜನಿಕರು ಹಾಗೂ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎಸ್.ಜಿ.ದೊಡಮನಿ, ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ, ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಪಿಡಿಓ ರಾಮಚಂದ್ರ ಮಾದರ, ಜುನ್ನೇದಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಕಬಾಲ ಸತ್ತಾರ, ಸಿಆರಸಿ ಇಕಬಾಲ ಉಮರಖಾನ, ಮುಜಕ್ಕಿರ ಬಾಗೆ, ಮುಶ್ಫಿಕ ಜಿನಾಬಡೆ, ಮುಖ್ಯೋಪಾಧ್ಯಾಯ ಐ.ಎನ.ಪಟೇಲ, ಮೆಲಗಡೆ, ಸಾಧಿಕ್ ರೋಹಿಲೆ, ಸಯೀದ್ ದೇಸಾಯಿ, ಅಮಿನ್ ವಾಟೆ, ಪುರಸಭೆ ಸದಸ್ಯರು ಇತರರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!