ಮುಗಳಖೋಡ :ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ

Share the Post Now

ವರದಿ : ಪ್ರಕಾಶ ಚ ಕಂಬಾರ ಮುಗಳಖೋಡ
ಸದೃಢ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅವಶ್ಯ : ಶಿವಬಸವ ಸ್ವಾಮೀಜಿ


ಮುಗಳಖೋಡ : ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಬಹ ಮುಖ್ಯವಾದದ್ದು, ಔಪಚಾರಿಕ ಶಿಕ್ಷಣ ನೀಡುವುದರೊಂದಿಗೆ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಜೊತೆ ನೈತಿಕ ಶಿಕ್ಷಣವನ್ನು  ನೀಡಿ ಉತ್ತಮ ಸಂಸ್ಕೃತಿಯನ್ನು ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತಹ ಬೆಳೆಸುವಂತಹ ಶಿಕ್ಷಣವನ್ನು ನೀಡಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದು ಅಥಣಿಯ ಗಚ್ಚಿನ ಮಠದ ಪರಮಪೂಜ್ಯ ಶ್ರೀಗಳಾದ ಶ್ರೀ ಬಸವ ಪ್ರಭು ಮಹಾಸ್ವಾಮೀಜಿಯವರು ತಮ್ಮ ಅಭಿವ್ಯಕ್ತಿಗಳ ಮೂಲಕ ಆಶೀರ್ವಚನವನ್ನು ನೀಡಿದರು.
  ಅವರು ಪಟ್ಟಣದ ರೈನಬೋ ಸೇಂಟ್ರಲ್ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಮಕ್ಕಳನ್ನು  ಶಿಕ್ಷಣ ಮೂಲಕ ಸುಸಂಸ್ಕೃತ ನೈತಿಕ ಮೌಲ್ಯಗಳನ್ನು ಬೆಳೆಸುವುದುರೊಂದಿಗೆ ಸಮಾಜದ ಉತ್ತಮ ಗುಣಮಟ್ಟದ ಪ್ರಜೆಗಳನ್ನಾಗಿ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
   ನಂತರ ಹಿಪ್ಪರಿಗಿ ಮಠದ ಶ್ರೀಗಳಾದ ಪ್ರಭು ಬೆನ್ನಾಳಿಯವರು ಮಾತನಾಡಿ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕೆಂದು  ಸಮಾರಂಭದಲ್ಲಿ ಸೇರಿದ ಪಾಲಕರಿಗೆ ತಮ್ಮ ಮಾತಿನ ಮನಮುಟ್ಟುವಂತೆ ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಸಾಹಿತಿಗಳಾದ ಡಾ ವಿ ಎಸ್ ಮಾಳಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗೌರವ ಅಧ್ಯಕ್ಷ ಸ್ಥಾನ ಅಲಂಕರಿಸದ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಸೇರಿ ಸಭೆಯನ್ನುದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
  ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಕಾರ್ಯದರ್ಶಿ ಪ್ರಭುಗೌಡ ಖೇತಗೌಡರ, ಪುರಸಭೆ ಸದಸ್ಯ ಮಹಾವೀರ ಕುರಾಡೆ, ಮುಖಂಡರಾದ ಗಿರಿಗೌಡ ಪಾಟೀಲ, ಯಮನಪ್ಪ ಬಾಬನ್ನವರ, ಪ್ರಾಚಾರ್ಯರಾದ ಶಿವಾನಂದ ಹೆಗಡೆ ಮರನೂರ ಅಂಗ ಸಂಸ್ಥೆಗಳುಯ ಎಲ್ಲ  ಮುಖ್ಯಸ್ಥರು, ಶಿಕ್ಷಕರು, ವಿವಿಧ ಗ್ರಾಮಗಳಿಂದ ಆಗಮಿಸಿದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!