ಬೆಳಗಾವಿ.ಹಳ್ಳೂರ .
ಮಕ್ಕಳ ಶಿಕ್ಷಣದ ಭದ್ರ ಬುನಾದಿ ಬಾಲ್ಯದ ಜೀವನ ಮಕ್ಕಳಿಗೆ ಸಂಸ್ಕಾರ ಶಿಕ್ಷಣ, ಶಿಸ್ತು ಮತ್ತು ಪ್ರೀತಿಯಿಂದ ಆರಂಭವಾಗಬೇಕು. ತಂದೆ ತಾಯಿ ಗುರು ಹಿರಿಯರಿಗೆ ಗೌರವಿಸಬೇಕು ಈ ದಿಶೆಯಲ್ಲಿ ಮಕ್ಕಳ ತಂದೆ ತಾಯಿ ಮತ್ತು ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆಂದು ನಿವೃತ್ತ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಅವರು ಮೂಡಲಗಿ ಹೊರ ವಲಯದಲ್ಲಿರುವ ವಿ ಬಿ ಸೋನವಾಲ್ಕರ ಆಂಗ್ಲ ಮಾಧ್ಯಮ ಹಾಗೂ ಬಿ ವಿ ಸೋನವಾಲ್ಕರ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಥಿತಿ ಉಪನ್ಯಾಸಕರಾಗಿ ಮಾತನಾಡಿ ಆಧುನಿಕ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚು ಮಹತ್ವ ಇದ್ದು,ಶಿಕ್ಷಣದ ಜತೆಯಲ್ಲಿಯೇ ಕ್ರೀಡೆ, ಸಾಂಸ್ಕೃತಿಕ ಪಾಲ್ಗೊಳ್ಳುವಿಕೆಗೂ ಆದ್ಯತೆ ನೀಡಬೇಕು.ಶಿಕ್ಷಣ ವ್ಯಕ್ತಿತ್ವದ ಸಮಗ್ರ ವಿಕಾಸಕ್ಕೆ ಪೂರಕವಾಗಿದ್ದು, ಉತ್ತಮ ಜೀವನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ, ಸಂಜಯ ಸಿಂದಿಹಟ್ಟಿ ಮಾತನಾಡಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ, ಕನಸುಗಳನ್ನು ಅರಳಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು. ಕಲಿಕಾ ವಾತಾವರಣ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.ಸೂಕ್ತ ಸೌಲಭ್ಯ ನೀಡಿ, ಅವರನ್ನು ಪ್ರೇರೇಪಿಸಿ, ಉನ್ನತ ಸಾಧನೆಗೆ ಅವಕಾಶ ಕಲ್ಪಿಸಬೇಕು.ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ಬೆಳೆಸಿ ಪಾಠವನ್ನು ಬೋದಿಸಿದರೆ ಮಕ್ಕಳ ಸಾಧನೆಗೆ ಸಹಕಾರಿ ಎಂದು ಹೇಳಿದರು.
ವಿಶೇಷ ಆಹ್ವಾನಿತರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಆವರಿಗೆ ಸನ್ಮಾನಿಸಿ ಗೌರವಿಸಿದರು.ಪ್ರಾಚಾರ್ಯರಾದ ಆರ್ ಆರ್ ಮೇದಗೋಪ್ಪ ವರದಿ ವಾಚನ ಮಾಡಿದರು.
ಈ ಸಮಯದಲ್ಲಿ ಸಾನಿದ್ಯ ವಹಿಸಿದ ನಿಲಾಂಬಿಕಾ ಮಾತೋಶ್ರೀ.ಲೈನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುನೀತಾ ಹೊಸೂರ. ಕಾರ್ಯದರ್ಶಿ ಶಿವು ಹೊಸೂರು. ಕ್ಷೇತ್ರ ಶಿಕ್ಷಣಾಧಿಕಾರಿ ಆಜೀತ ಮನ್ನಿಕೇರಿ.ವಿಶೇಷ ಆಹ್ವಾನಿ ನಿತರಾದ ಮುರಿಗೆಪ್ಪ ಮಾಲಗಾರ. ಗಣ್ಯ ವ್ಯಾಪಾರಸ್ಥರಾದ ರಾಘವೇಂದ್ರ ಸವಳೆಕರ.ಪ್ರಾಚಾರ್ಯರಾದ ಕಿರಣ ಉಪಾಧ್ಯ.ಸತೀಶ ಬಿ ಎಸ್. ರೇವಪ್ಪಾ ಸತ್ತಿಗೇರಿ, ಸಮೀರ್ ದಬಾಡಿ. ರಾಹುಲ ಉತರೆ.ಬಿ ಕೆ ಡಾಂಗೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳಿದ್ದರು. ಕಾರ್ಯಕ್ರಮವನ್ನು ಸಾದಿಯಾ ಮುಲ್ಲಾ ಸ್ವಾಗತಿಸಿದರು.
ಗಿರೀಶ ಆರ್ ನಿರೂಪಿಸಿದರು.ವಿವೇಕಾನಂದ ರೊಳ್ಳಿ ವಂದಿಸಿದರು.
ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.