ದೇಶದ ಪ್ರಗತಿಗಾಗಿ, ಹಿಂದೂ ಧರ್ಮದ ಉಳಿವಿಗಾಗಿ ನಾವೆಲ್ಲರೂ ಶ್ರಮಿಸೋನ : ಬಸವರಾಜೇಂದ್ರ ಶ್ರೀಗಳು
ಪುಷ್ಪವೃಷ್ಟಿಯೊಂದಿಗೆ ಶ್ರೀಗಳಿಗೆ ಭವ್ಯ ಸ್ವಾಗತ
ಮುಗಳಖೋಡ: ನಮ್ಮ ದೇಶದ ಸಂಸ್ಕೃತಿ , ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಪ್ರಯಾಗರಾಜನ ಕುಂಭಮೇಳದಲ್ಲಿ ನಡೆಯತ್ತಿದೆ, ಈ ದೇಶ ಹಾಗೂ ಧರ್ಮದ ಬಗ್ಗೆ ಜಾಗೃತರಾಗಿರಬೇಕು ನಮ್ಮ ಹಿಂದೂ ಧರ್ಮದಲ್ಲಿ ವಸುದೈವಕುಟುಂಬಕಂ ಎಂಬಂತೆ ನಾವೆಲ್ಲರೂ ಒಂದೆ ಎಂದು ಒಗ್ಗಟ್ಟಾಗಿ ದೇಶದ ಪ್ರಗತಿಗಾಗಿ ಧರ್ಮದ ಉಳಿವಿಗಾಗಿ ಶ್ರಮಿಸೋನ, ಈ ಕುಂಭ ಮೇಳದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಛಲೇರಿಯ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು
ಪಟ್ಟಣದಲ್ಲಿ ಫೆ.23 ರವಿವಾರದಂದು ಪ್ರಯಾಗರಾಜನ ತ್ರಿವೇಣಿ ಸಂಗಮದಲ್ಲಿ ಪಟ್ಟಣದ ಭಕ್ತರೊಂದಿಗೆ ಪವಿತ್ರ ಸ್ಥಾನ ಮಾಡಿ ಆಗಮಿಸಿದ ಅಛಲೇರಿ ಜಿಡಗಾ ಮಠದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳವರನ್ನು ಪಟ್ಟಣದ ಭಕ್ತರು ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಿದರು.
ಪಟ್ಟಣದ ಬಸ್ಸ ನಿಲ್ದಾಣದ ಬಳಿ ತೆರೆದ ವಾಹನದಲ್ಲಿ ಆಗಮಿಸಿದ ಶ್ರಿಗಳಿಗೆ ಭಕ್ತರು ಪುಷ್ಪವೃಷ್ಟಿ ಮಾಡಿದರು. ಬಳಿಕ ಬಸ್ಸ ನಿಲ್ದಾಣದಿಂದ ವಿವೇಕಾನಂದ ವೃತ್ತದವರೆಗೆ ಆರತಿ ಕುಂಬ ಹೊತ್ತ ಮಹಿಳೆಯರು, ಹಾಗೂ ಡಿಜೆ ಧ್ವನಿವರ್ಧಕಗಳ ಮೂಲಕ ಭವ್ಯ ಮೆರವಣಿಗೆ ಮೂಲಕ ಕರೆದೊಯ್ದುರು.
ಬಳಿಕ ಶ್ರೀ ಕೆನಾಲ ಬಸವೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಿದ ಶ್ರೀಗಳು ಪ್ರಯಾಗರಾಜನ ತ್ರಿವೇಣಿ ಸಂಗಮದಲ್ಲಿ ತೆಗೆದುಕೊಂಡು ಬಂದ ತೀರ್ಥವನ್ನು ಎಲ್ಲ ಭಕ್ತರಿ ತಲೆ ಮೇಲಿ ಹಾಕಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮುಖಂಡ ರಮೇಶ ಖೇತಗೌಡರ, ರಮೇಶ ಯಡವಣ್ಣವರ, ಗೌಡಪ್ಪ ಖೇತಗೌಡರ, ಕೃಷ್ಣಾರಾವ ನಾಯಿಕ, ಉಮೇಶ ಹೊಸತೋಟ, ರಾಜು ಹುಬ್ಬಳ್ಳಿ, ಸಂಗಪ್ಪ ಬಾಳೋಜಿ, ನಾಗಪ್ಪ ಹುಕ್ಕೆರಿ, ಅಲ್ಲಪ್ಪ ಬೆಳಗಲಿ, ಅಚ್ಚಪ್ಪ ಬೆಳಗಲಿ, ವಿಠ್ಠಲ ಯಡವಣ್ಣವರ, ರವಿ ಖೇತಗೌಡರ, ಅನಿಲ ಖೇತಗೌಡರ, ಚೇತನ ಕುಲಿಗೋಡ, ಪರಗೌಡ ಖೇತಗೌಡರ, ಮಲ್ಲು ಖೇತಗೌಡರ ಹಾಗೂ ಪಟ್ಟಣದ ಹಿರಿಯರು ಉಪಸ್ಥಿತರಿದ್ದರು.
ವರದಿ: ಸಂತೋಷ ಮುಗಳಿ
