ವರದಿ:ಸಚಿನ ಕಾಂಬ್ಳೆ. ಕಾಗವಾಡ
ಕಾಗವಾಡ ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಗೊಳಿಸುವಂತೆ ಒತ್ತಾಯಿಸಿ, ಡಿ. 19 ರಂದು ಕಾಗವಾಡ ತಹಶೀಲ್ದಾರರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.
ಈ ಕುರಿತು ಡಿ. 17 ರಂದು ಶಹಾಪೂರ ಗ್ರಾಮದಲ್ಲಿ ಗ್ರಾಮಸ್ಥರು ಮಾಹಿತಿ ನೀಡುತ್ತಾ 3 ವರ್ಷಗಳ ಹಿಂದೆ ಪ್ರವಾಹ ಬಂದು 92 ಕುಟುಂಬಗಳ ಮನೆ ಹಾನಿಯಾಗಿದ್ದು, ಇಲ್ಲಿಯವರೆಗೆ ಮನೆ ಮಂಜೂರಾತಿ ನೀಡಿರುವುದಿಲ್ಲ. ಈ ಕುರಿತು ಹಲವಾರು ಸಲ ಪ್ರತಿಭಟನೆ ಮಾಡಿದರೂ ಕೂಡ ಪರಿಹಾರ ದೊರೆಯದೇ ಇರುವುದರಿಂದ ಸೋಮವಾರ ಡಿ. 19 ರಂದು ಕಾಗವಾಡ ತಹಶೀಲ್ದಾರ ಕಾರ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ದೀಪಕ ಪಾಟೀಲ, ಮಾದಗೌಡ ಪಾಟೀಲ, ಬಬನ ಕಮತಗೆ, ಅಪ್ಪಾಸಾಬ ಪಾಟೀಲ, ಬಾಬು ಕಾಂಬಳೆ, ಬಾಬು ಉಮರಾಣಿ, ದಾದಾಗೌಡ ಪಾಟೀಲ, ಮೋಹನ ಜಾಧವ, ಪ್ರಶಾಂತ ಕಾಂಬಳೆ, ನಿವೃತ್ತಿ ಸನದಿ, ಸುಮನ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.