ಪತ್ರಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ ತಡೆಯಲು ಪತ್ರಕರ್ತರ ಪಡೆ ನಿರ್ಮಾಣ

Share the Post Now

ಹುಕ್ಕೇರಿ: ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ತಾಲೂಕಾ ಮಟ್ಟದ ಸಭೆಯನ್ನು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು ಹುಕ್ಕೇರಿ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಹುಕ್ಕೇರಿ ತಾಲೂಕಾ ಗೌರವಾಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರ ವೈಯಕ್ತಿಕ ಹೆಸರು ಹಾಳು ಮಾಡುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಅಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಆದ ಕಾರಣ ಅವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉನ್ನತದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯು ಎಲ್ಲಾ ಗ್ರಾಮ ಮಟ್ಟದಲ್ಲಿ ಸಮೀತಿ ರಚಿಸಿ ನಾಮ ಫಲಕಗಳನ್ನು ಅಳವಡಿಸಿ ಜನರಿಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ತಿಳುವಳಿಕೆ ನೀಡುವುದು ಇನ್ನೂ ಮುಂದೆ ಭ್ರಷ್ಟಾಚಾರ ಆಗದಂತೆ ತಡೆಯುವುದು ಹೇಗೆ ಮತ್ತು ಪತ್ರಕರ್ತರ ಮೇಲೆ ಆಗುವ ದಬ್ಬಾಳಿಕೆ ಹಿಂಸೆ ತಡೆಯವು ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಈ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಧಾರಗಳು ತೆಗೆದುಕೊಳ್ಳಲಾಯಿತು ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ ಚೌಗಲಾ. ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾವೃದ್ದಿ ಸಂಘ ಹುಕ್ಕೇರಿ ತಾಲೂಕ ಅಧ್ಯಕ್ಷ ಹಾಗೂ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷರಾದ ರವಿ ಬಿ ಕಾಂಬಳೆ. ಉಪಾಧ್ಯಕ್ಷರಾದ ಸುರೇಶ್ ಢಂಗಿ.ಲಗಮಪ್ಪಾ ಕಾಳೆ.ಪ್ರಶಾಂತ ನಾಗನೂರಿ. ಬ್ರಹ್ಮಾನಂದ ಪತ್ತಾರ.ರಾಘವೆಂದ್ರ ಕಯ್ರಾಗೋಳ.ಗಣಪತಿ ಜೇಡರ.ಪರುಶುರಾಮ ತಳವಾರ ತೇಜ ಪ್ರಭು.ಶಿವಾಜಿ ಎನ್ ಬಾಳೇಶಗೋಳ.ಮುಂತಾದವರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!