ವರದಿ :ಶಶಿಧರ ಕೊಕಟನೂರ
ಬೆಳಗಾವಿ.ರಾಯಬಾಗ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದಲ್ಲಿ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಯುಗಾದಿ ಜಾತ್ರಾಮಹೋತ್ಸವ ಪ್ರಯುಕ್ತ ಹಾಗೂ ಶ್ರೀಗುರುದೇವ ಬ್ರಹ್ಮಾನಂದ ಸ್ವಾಮೀಜಿ ರವರ 47 ನೇಯ ಮತ್ತು ಶ್ರೀ ಗುರು ಸಿದ್ದೇಶ್ವರ 17 ನೇಯ ಮಹಾಸಮಾದಿ ಮಹೋತ್ಸವದ ಅಂಗವಾಗಿ ಎಂಟು ದಿನಗಳಿಂದ ಬೆಳ್ಳಿಗೆ ಸಾಯಂಕಾಲ ಬೇರೆ ಬೇರೆ ಅಧ್ಯಾತ್ಮಿಕ ವಿಷಯದ ಬಗ್ಗೆ ಹತ್ತಾರು ಸ್ವಾಮಿಜಿ ಹಾಗೂ ಮಾತೆಯರಿಂದ ಪ್ರವಚನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಾನಂದವಾಡಿ ಗ್ರಾಮದ ಶ್ರೀ ಮಠದ ಪೀಠಾಧಿಪತಿ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ವಹಿಸಿಕೊಂಡಿದ್ದರು,
ಕಡೆಯ ದಿನದಂದೂ ಶ್ರೀಮಠದಲ್ಲಿ ಶ್ರೀಗುರುದೇವ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಶ್ರೀ ಸಿದ್ದೇಶ್ವರ ಸಾಮೀಜಿ ಮೂರ್ತಿಗಳಿಗೆ ರುದ್ರಾಭಿಷಕ ನಡೆಯಿತು,
ಬೆಳ್ಳಗೆಯಿಂದ ಶ್ರೀ ಮಠದಲ್ಲಿ ಭಕ್ತಾಧಿಳಿಂದ ಓಂಕಾರ ಪಟನ ಹಾಗೂ ಜಪಯಜ್ಙ ನಡೆಯಿತು,
ಮದ್ಯಾನ ಶ್ರೀ ಮಠಕ್ಕೆ ಆಗಮಿಸಿದ ಸರ್ವಭಕ್ತಾಧಿಗಳಿಗೆ ಅನ್ನ ಪ್ರಸಾದ ವಿನಿಯೋಗ ಜರುಗಿತು,
ಸಾಯಂಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗುರು ಬ್ರಹ್ಮಾನಂದರ ಪಲ್ಲಕಿ ಮಹೋತ್ಸವ ಹಾಗೂ ಕುದರೆಯ ಸಾರೋಟಿನಲ್ಲಿ ಸ್ವಾಮಿಜಿಗಳ ಮೆರವಣಿಗಯೋಂದಿಗೆ ಸುಮಂಗಲೆಯರಿಂದ ಕುಂಭ, ಆರತಿ ಸಕಲ ವಾದ್ಯಗಳೊಂದಿಗೆ ಸಾಗಿ ಮರಳಿ ಶ್ರೀ ಮಠಕ್ಕೆ ತಲುಪಿತು.
ಸಾಯಂಕಾಲ ವಿಶೇಷ ಪ್ರವಚನ ಕಾರ್ಯಕ್ರಮ ನಡೆಯಿತು.
ನಂತರ ಗದಗದ ಶಿವಾನಂದ ಬ್ರಹ್ಮನ ಮಠದ ಶ್ರೀ ಪ.ಪೂ ಶ್ರೀ ಮಜ್ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳ ತುಲಾಭಾರ ಹಾಗೂ ಬೆಳ್ಳಿ ಕೀರಿಟ ದಾರೆಣೆ ನಡೆಯುವುದರ ಮೂಲಕ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿತ್ತು.
ಈ ಸಂದರ್ಭದಲ್ಲಿ ಕರಿಕಟ್ಟಿಯ ಪ.ಪೂ ಡಾ.ಬಸವರಾಜ ಮಹಾ ಸ್ವಾಮಿಗಳು,ಕೋಳಿಗುಡ್ಡದ ಶ್ರೀ ಸ್ವರೂಪಾನಂದ ಮಹಾಸ್ವಾಮಿಗಳು, ಶ್ರೀ ಬಾಬುರಾವ ಮಹಾರಾಜರು,ಪ.ಪೂ ಮಾತೋಶ್ರೀ ಶಾರದಾ ಭಾರತಿಯವರು,ಪ.ಪೂ ಮಾತೋಶ್ರೀ ಅಕ್ಕಮಹಾದೇವಿಯರು,ಮೊರಬ ಗ್ರಾಮದ ಶರಣ ಡಿ.ಎಸ್ ನಾಯಿಕ ಅವರು ಉಪಸ್ಥಿತರಿದ್ದರು.