ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಕೇಂದ್ರದಲ್ಲಿ ಒಂದು ದಿನದ ಕಾರ್ಯಾಗಾರ

Share the Post Now

ವರದಿ: ರಾಜಶೇಖರ ಶೇಗುಣಸಿ

ಮಕ್ಕಳ ಮಾನಸಿಕ ಸಾಮರ್ಥ್ಯ ಅರಿತು ಪಾಠ ಭೋದನೆ ಮಾಡಿ ಪ್ರೊ ಎಂ ಜಿ ಹೆಗಡೆ ಅಭಿಮತ*
ಬೆಳಗಾವಿಯ ಭರತೇಶ ಕಾಮರ್ಸ್ ಕಾಲೇಜಿನ ಎಮ್ ಬಿ ಎ ಹಾಲ್ ಅಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಇಂಗ್ಲಿಷ್ ಶಿಕ್ಷಕರ ಅಸೋಸಿಯೇಷನ್  ವತಿಯಿಂದ *ನೇವಿಗೆಟಿoಗ್ ದಿ ಡಿಜಿಟಲ್ ಲ್ಯಾಂಡ್ಸ್ಕೇಪ್ ಆಫ್ ಲಿಟರೇಚರ್* ಎಂಬ ವಿಷಯ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಸ್ಥಳೀಯ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಪಾಲ್ ಕೆಮಲಾಪುರೆ ಅವರು ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಸ್ಥಾನವನ್ನು ರಾಣಿ ಚನ್ನಮ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಸಿ ಎಂ ತ್ಯಾಗರಾಜ್ ವಹಿಸಿಕೊಂಡು ಮಾತನಾಡಿ  ಜಯದ ಅನಂತ ಜಯಂತ ಎಂದು ಜಯಂತ ಕಾಯ್ಕಿಣಿ ಅವರ ಬಗ್ಗೆ  ವರ್ಣನೆ ಮಾಡಿದರು. ಒಂದು  ದೊಡ್ಡ ಜವಾಬ್ದಾರಿ ನಮ್ಮ ಶಿಕ್ಷಕರ ಮೇಲಿದೆ ಚೆನ್ನಾಗಿ ಮಕ್ಕಳಿಗೆ ಬೋಧನೆ ಮಾಡಬೇಕು ಹಾಗೂ ಮತ ಪಂಥ ಎಂಬ ಭೇದ ಭಾವ ಮಾಡದೆ ಒಳ್ಳೆಯ ಪಾಠ ಮಾಡಬೇಕು. ಮನುಕುಲಕ್ಕೆ ಸುಖ ಶಾಂತಿ ಕೊಡುವಂಥ ಬೋಧನೆ ನಮ್ಮದಾಗಬೇಕು. ಇಂಗ್ಲಿಷ್ ಭಾಷೆಗೆ ನಮ್ಮನ್ನು ಬೇರೆ ಲೋಕಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಇದೆ. ಅದಕ್ಕೆ ಭಾಷೆಯನ್ನು ಅರ್ಥ ಮಾಡಿಕೊಂಡು ನಾಟಕಗಳು, ಕತೆಗಳನ್ನು ಹೇಳುವುದರ ಮೂಲಕ, ಅಭಿನಯದ  ಮೂಲಕ ಮಕ್ಕಳಿಗೆ  ಕಲಿಸಬೇಕು. ಶಿಕ್ಷಕರು ಇವತ್ತಿನ ಮಕ್ಕಳಿಗೆ ಬೇಕಾಗುವ ಮೌಲ್ಯಗಳನ್ನು ನೀಡಿ ಸ್ವ ಪ್ರವೃತ್ತರಾಗುವಂತೆ ಮಾಡಬೇಕು. ಹೊಸ ಯೋಜನೆ ಹಾಗೂ ಹೊಸ ಸಾಧನೆ ಎಲ್ಲ ಶಿಕ್ಷಕರಿಂದ ಮಾತ್ರ ಸಾದ್ಯ ಹೀಗಾಗಿ  ನಾನು  ಅದನ್ನು  ಎಲ್ಲ ಶಿಕ್ಷಕರಿಂದ ಅಪೇಕ್ಷೆ ಪಡುತ್ತೇನೆ ಎಂದು ತಿಳಿಸಿದರು. ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಹೇಳಿ ಮಕ್ಕಳನ್ನು ಸಮಾಜಕ್ಕೆ ಸನ್ನದ್ದರನ್ನಾಗುವಂತೆ ಮಾಡಿ ಎಂದು ತಿಳಿಸಿದರು.

ಕೀನೊಟ್ ಸ್ಪೀಕರ್ ಆಗಿ ರಾಣಿ ಚನ್ನಮ್ಮ ವಿಶ್ವದ್ಯಾಲಯದ ಡಿನ ಹಾಗೂ ಕಲಾ ವಿಭಾಗದ ಮುಖ್ಯಸ್ಥರು  ಶ್ರೀಯುತ ವಿಜಯ  ನಾಗನನ್ನವರ್ ಮಾತನಾಡಿ ಇವತ್ತಿನ ಮಕ್ಕಳಿಗೆ ಡಿಜಿಟಲ್ ಟೆಕ್ನಾಲಜಿ ಮೂಲಕ  ಒಳ್ಳೆಯ ಅನುಭವ, ಶಿಕ್ಷಣ, ಸಂಸ್ಕಾರ ಕೊಡಬೇಕಾದುದು ಎಲ್ಲ ಶಿಕ್ಷಕರ ಜಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವದ್ಯಾಲಯದ ಕುಲಸಚಿವರಾದ ರಾಜಶ್ರೀ ಜೈನಾಪುರ ಕೆಎಎಸ್, ಪರೀಕ್ಷಾ ವಿಭಾಗದ ಕುಲಸಚಿವರಾದ ಶ್ರೀ ರವೀಂದ್ರನಾಥ್ ಕದಂ ಅವರು ಮಾತನಾಡಿ ಶಿಕ್ಷಕರು ಸಮಾಜಕ್ಕೆ ಒಂದು ಕನ್ನಡಿ ಇದ್ದ ಹಾಗೆ ಮುಗ್ದ ಮಕ್ಕಳ ಮನಸ್ಥಿತಿ ಅರಿತುಕೊಂಡು ಒಳ್ಳೆಯ ತಂತ್ರಜ್ಞಾನ ಬಳಕೆ ಮಾಡಿ ಬೋಧನೆ ಮಾಡಬೇಕೆಂದು ತಿಳಿಸಿದರು.
ಭರತೇಶ ಕಾಲೇಜಿನ ಸೆಕ್ರೆಟರಿ ವಿನೋದ ದೊಡ್ಡಣ್ಣವರ, ಚೇರ್ಮನ್ ಆಗಿರುವ ಹಿರಾಚಂದ ಕಲಮನಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಚೇರ್ ಪರ್ಸನ ಕವಿತಾ ಕುಸುಗಲ್, ಭರತೇಶ ಕಾಲೇಜಿನ ಕೋ ಆರ್ಡಿನೆಟರ್ ನೀತಾ ಗಂಗರೆಡ್ಡಿ ಹಾಗೂ ರುಕ್ಟಾ ಅಧ್ಯಕ್ಷ ಹಾಗೂ ಇಂಗ್ಲೀಷ್ ಮೌಲ್ಯಮಾಪನ ಕೇಂದ್ರದ ಚೇರ್ಮನ್ ಆಗಿರುವ ಶ್ರೀ ಮಲ್ಲಿಕಾರ್ಜುನ ಬಿರಾದಾರ ಆಗಮಿಸಿದ್ದರು.
ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯ್ಥರಾದ ಪ್ರೊ ರಾಬರ್ಟ್ ಜೋಸ್ ಹಾಗೂ ಬರಹಗಾರರು, ವಿಚಾರವಾದಿಗಳು ಆದ ಶ್ರೀ ಎಂ ಜಿ ಹೆಗಡೆ ಅವರು ಆಗಮಿಸಿ ಮಾತನಾಡಿ ಇವತ್ತಿನ ಸಂದರ್ಭದಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ಅತ್ಯವಶ್ಯಕವಾಗಿ ಬೇಕಾಗಿದೆ. ಮೊದಲು ಶಿಕ್ಷಕರು ಡಿಜಿಟಲ್ ಆಗಿ ನಿವು ಸರಿಯಾಗಿ ವಿಷಯ ಅರಿತುಕೊಂಡು ಕಾಲೇಜ್ ಅಲ್ಲಿ ಸರಿಯಾಗಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಅನುಭವ, ನೈತಿಕ ಮೌಲ್ಯ, ಇಂಗ್ಲಿಷ್ ಭಾಷೆಯ ಪರಿಚಯ, ಮುಕ್ತವಾಗಿ ಶಿಕ್ಷಕರು ಮಕ್ಕಳ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡು ಪ್ರೀತಿಯಿಂದ ಅವರನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ ಆಮೇಲೆ  ಮಕ್ಕಳಿಗೆ ಒಳ್ಳೆಯ ಅನುಭವ ನೀಡಲು ಸಾದ್ಯ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಲೋಕದ ಅನುಭವಿ ಜಯಂತ ಕಾಯ್ಕಿಣಿ ಮಾತನಾಡಿ ಕವಿತೆಗಳು ಮತ್ತು ಸಾಹಿತ್ಯ ಇವುಗಳ ನಡುವೆ ಒಳ್ಳೆಯ ಒಡನಾಟ ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಸಾಹಿತ್ಯ ಬೆಳೆಯಲು ಸಾದ್ಯ.  ನಾನು ಬರೆದ ಕವಿತೆಗಳು ಜನರ ಮನಸಿಗೆ ಮುಟ್ಟಿವೆ ಅವುಗಳನ್ನೂ ಬೇರೆ   ಅನುಭವಗಳಿಂದ ಅರ್ಥವನ್ನು ತೋರಿಸಿ ಅನುಭವಿಸಿದಾಗ ಮಾತ್ರ ಎಲ್ಲವನ್ನೂ ಕಲಿಯಲು ಸಾಧ್ಯ. ಒಳ್ಳೆಯ ಕಾವ್ಯ ಪ್ರೇಮಿಗಳಾಗಿ ಓದಿ ಒಳ್ಳೆಯ ಜ್ಞಾನ ಬೆಳೆಸಿ ಕೊಳ್ಳಿ ಎಂದು ಅನುಭವದ ಮಾತುಗಳನ್ನು ಆಡಿದರು.
ಈ ಕಾರ್ಯಾಗಾರವನ್ನು ಆಯೋಜನೆ ಮಾಡಿದ ಇಂಗ್ಲಿಷ್ ಫೋರಮ್ ಚೇರ್ಮನ್ ಆಗಿರುವ ವಿ ಆರ್ ಪಾಟೀಲ, ಸೆಕ್ರೆಟರಿ ಆಗಿರುವ ಡಾ.ಎಸ್ ಬಿ ಬಿರಾದಾರ, ಟ್ರೇಜರರ್ ಆದ ಪ್ರೊ ಆರ್ ಬಿ ಹವಿನಾಳೆ, ವೈಸ ಪ್ರೆಸಿಡೆಂಟ್ ಆದ ಪ್ರೊ. ಸಚಿನ ಕಾಂಬಳೆ ಒಂದು ದಿನದ ಕಾರ್ಯಾಗಾರದ ರುವಾರಿಗಳಾಗಿದ್ದರು.
ರಾಣಿ ಚನ್ನಮ್ಮ ವಿಶ್ವದ್ಯಾಲಯದ ಇಂಗ್ಲಿಷ್ ವಿಭಾಗದ ಎಕ್ಸಿಕ್ಯೂಟಿವ್ ಬಾಡಿ ಸದಸ್ಯರು, ಇಂಗ್ಲಿಷ್ ವಿಭಾಗದ ಎಲ್ಲ ಉಪನ್ಯಾಸಕರು ಹಾಜರಿದ್ದರು.
ಈ ಕಾರ್ಯಾಗಾರದ ನಿರೂಪಣೆಯನ್ನು ಭರತೇಶ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ  ಅಶ್ವಿನಿ ಮಲಘಾಣ ನಿರೂಪಿಸಿದರು, ಹಾಗೂ ಸ್ವಾಗತವನ್ನು ಡಾ.ಎಸ್ ಬಿ. ಬಿರಾದಾರ ಮಾಡಿದರು. ವಂದನಾರ್ಪಣೆಯನ್ನು  ಪ್ರೊ ಮಹೇಶ್ ಹೂಲಿ ನೆರವೇರಿಸಿಕೊಟ್ಟರು.
ಈ ಸಂದರ್ಬದಲ್ಲಿ ಪ್ರೊ ರಾಜಶೇಖರ ಶೇಗುಣಸಿ,  ಪ್ರೊ ಎಸ್ ಎನ್ ಪಾಟೀಲ್, ಪ್ರೊ ಶಾಂತಿನಾಥ ಬಲೋಜ, ಪ್ರೊ P B ತೆಗ್ಗಿಹಳ್ಳಿ, ಎಂ ಆಯ್ ಬಿರಾದರ್, ಮಾಯಾ ಖಡೆದ, ರೇಷ್ಮಾ ಕಲಬುರಗಿ, ಅರುಣ ಲೋಕರೆ, ಶೃತಿ ಎ, ವಿರೂಪಾಕ್ಷ ಅಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!