ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ!ಸವದಿ ನಂತರ ಅನಿಲ್ ಬೆನಕೆ ಕಾಂಗ್ರೆಸ್ ನತ್ತ ಚಿತ್ತ!

Share the Post Now

ಬೆಳಗಾವಿ.


ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವಾದಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿಯಾದ ನಂತರ, ಅನಿಲ್ ಬೆನಕೆ ಸಹಿತ ಅದೇ ಹಾದಿಯಲ್ಲಿದ್ದಾರಾ ಎಂದು ಆಶ್ಚರ್ಯಪಟ್ಟರೆ ಆಶ್ಚರ್ಯವಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಬಂಡಾಯದ ಬಿರುಗಾಳಿ ಬೀಸಲಾರಂಭಿಸಿದ್ದು, ರಾಜಕೀಯ ಮೇಲಾಟಕ್ಕೆ ಕಾರಣವಾಗಲಿದೆಯೇ? ಎಂಬ ಅನುಮಾನಗಳು ಸೃಷ್ಟಿಯಾಗತೊಡಗಿವೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಬೆಳಗಾವಿಯ ಅಂಬೇಡ್ಕರ್ ಉದ್ಯಾನದಲ್ಲಿ ಪಕ್ಷಾತೀತ ಹಾಗೂ ಟಿಕೆಟ್ ವಂಚಿತ ಅಭ್ಯರ್ಥಿಗಳು ಜಮಾಯಿಸಿ ಅಂಬೇಡ್ಕರರಿಗೆ ಶುಭಾಶಯ ಕೋರಿದರು. ಇದರಲ್ಲಿ ವಿಶೇಷ ಗಮನ ಸೆಳೆಯುವ ಅಂಶವೆಂದರೆ ಮಾಜಿ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಮತ್ತು ಅನಿಲ್ ಬೆನಕೆ ಕೈ ಕುಲುಕುತ್ತಾ ನಗುತ್ತಾ ಮಾತನಾಡುತ್ತಿದ್ದರು. ಅಂಬೇಡ್ಕರ್ ಪ್ರತಿಮೆ ಬಳಿ ಅನಿಲ್ ಬೆನಕೆ ಅವರ ಹೆಗಲ ಮೇಲೆ ಕೈಯಿಟ್ಟು ಹೋಗುತ್ತಿರುವ ದೃಶ್ಯ ನೋಡಿದ ಹಲವರು ಈ ಮಾತುಗಳನ್ನು ಆಡುತ್ತಿದ್ದರು ಅವರ ಸ್ನೇಹಪರ ಸಂವಾದದ ಮೂಲಕ, ಅವರು “ಹಮ್ ಸಾಥ್ ಸಾಥ್ ಹೈ” ಎಂದು ನಟಿಸುತ್ತಿದ್ದರು.

ಅನಿಲ್ ಬೆನಕೆ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

Leave a Comment

Your email address will not be published. Required fields are marked *

error: Content is protected !!