ಕುಡಚಿ
ವಿದ್ಯಾರ್ಥಿಗಳು ಜೀವನವನ್ನು ಯಶಸ್ವಿಗೊಳಿಸಲು ಯಶಸ್ವಿ ವ್ಯಕ್ತಿ ಅಥವಾ ತಾಯಿಯನ್ನು ಮಾದರಿ ಇಟ್ಟುಕೊಂಡು ದೈಹಿಕ ಚಟುವಟಿಕೆ, ಏಕಾಗ್ರತೆ, ಶಿಸ್ತು, ಸ್ವಗೌರವ, ಸಮಯ ನಿರ್ವಹಣೆ, ಜ್ಞಾನಾರ್ಜನೆ, ಅಭ್ಯಾಸ ವಿಧ, ಭವಿಷ್ಯದ ಯೋಜನೆ, ಗುರಿ ಮುಟ್ಟಲು ಪರಿಶ್ರಮ ಮಾಡಿದ್ದಲ್ಲಿ ಜೀವನದಲ್ಲಿ ಸರಳವಾಗಿ ಯಶಸ್ವಿ ಹೊಂದಬಹುದು ಎನ್ನುತ್ತಾ ಇವತ್ತಿನ ಆಧುನಿಕ ತಂತ್ರಜ್ಞಾನದ ಜೊತೆಗೆ ಬದಲಾಗಬೇಕಾಗಿದೆ ವಿದ್ಯಾರ್ಥಿಗಳು ನಿತ್ಯ 8ಗಂಟೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಹೇಳುತ್ತಾ ಅಭಾಜಿಯವರ ನಿಸ್ವಾರ್ಥ ಸೇವೆ ದೀನ ದಲಿತರಿಗಾಗಿ ಪರಿಶ್ರಮ ಜೀವನ ಯಶಸ್ಸಿಗೆ ಜೀವಂತ ಉದಾಹರಣೆ ಆಗಿದೆ ಎಂದು ಮುಖ್ಯ ಅತಿಥಿಯಾಗಿ ಪ್ರೋ.ಕೆ.ಬಿ.ಸ್ವಾತಿ ಹೇಳಿದರು.
ಅವರು ರಾಯಬಾಗ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಪ್ರಸಾರಕ ಮಂಡಳದ ಪದವಿ, ಸ್ನಾತಕೋತ್ತರ ವಿಭಾಗ ಹಾಗೂ ಬಿಪಿಎಡ್ ಎಂಪಿಎಡ್ 2024-25ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ.ಶಿಂಗಾಡಿ ಮಾತನಾಡಿ ವಿದ್ಯಾರ್ಥಿಗಳು ದಿನ ರಾತ್ರಿ ಮೊಬೈಲಲ್ಲಿ ಸಮಯ ಕಳೆಯುವ ಬದಲು ಪುಸ್ತಕ ಜೊತೆಗೆ ಸಮಯ ಕಳೆಯಿರಿ ಸಮಸ್ಯೆ ಬಂದಲ್ಲಿ ಶಿಕ್ಷಕರಿಂದ ಪರಿಹರಿಸಿಕೊಂಡು ಅವರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಲ್ಲಿ ಶಿಕ್ಷಕರಿಗೆ ನಿಜವಾದ ಗುರು ಕಾಣಿಕೆ ನೀಡಿದಂತಾಗುವುದು ವಿದ್ಯಾರ್ಥಿಗಳು ಇಂಜಿನಿಯರ, ಡಾಕ್ಟರ್ ಎನ್ನದೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರು ಅದು ಸಾಧನೆನೆ ರಾಜಕೀಯ ರಂಗದಲ್ಲೂ ಸಾಧನೆ ಮಾಡಿ ಉತ್ತಮವಾಗಿ ರಾಜ್ಯ ಆಳುವಂತವರಾಗಿ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ, ಸಂಸ್ಕೃತಿ ವಿಭಾಗದಲ್ಲಿ ಹಾಗೂ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೆಡಲ್ ನೀಡಿ ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ವಹಿಸಿದ್ದರು, ಕಾರ್ಯದರ್ಶಿ ಎಸ್.ಎಸ.ಶಿಂಗಾಡಿ, ಬಿಪಿಇಡಿ ಪ್ರಾಚಾರ್ಯ ಡಾ. ಆರ್.ಕೆ.ಪಾಟೀಲ, ಐ.ಎಸ.ಗೋಕಾಕ, ಕಾನೂನು ಕಾಲೇಜಿನ ಪ್ರಾಚಾರ್ಯ ಎಸ್.ಎಸ.ಕುರ್ಬೆಟ, ಪ್ರೋ.ಎಸ.ಬಿ.ಮರ್ಲಿಂಗನವರ, ಶೆಟ್ಟಿ ಸರ, ಪ್ರೋ.ಆರ.ಎಸ.ಗುಡೋಡಗಿ, ವಿದ್ಯಾರ್ಥಿ ಪ್ರತಿನಿಧಿ ಕಾಂತು ಕೂಗೆ, ವರ್ಷಾ ಎಸ್. ಇತರರು ಉಪಸ್ಥಿತರಿದ್ದರು
