ಮೂಡಲಗಿ.
ಪಟ್ಟಣದ
ಲಯನ್ಸ್ ಎಜುಕೇಶನ್ ಸೊಸೈಟಿಯ ಶಿವರಾಮದಾದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕೋತ್ಸವವನ್ನು ಆಚರಿಸಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊಫೆಸರ್ ಜಿ.ವಿ.ನಾಗರಾಜ ಪ್ರಭಾರಿ ಪ್ರಾಚಾರ್ಯರು ಎಂಇಎಸ್ ಪದವಿ ಕಾಲೇಜು, ಮೂಡಲಗಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಆಧುನಿಕ ಶಿಕ್ಷಣ ಅಗತ್ಯ ತಂತ್ರಜ್ಞಾನಗಳನ್ನು ಬಳಸಿ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಕಲಿಸೋಣ,
ಅದರೊಂದಿಗೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನಮ್ಮ ನೆಲದ ಸಂಸ್ಕೃತಿಯನ್ನು ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು. ಅತಿಥಿಯಾದ ಶ್ರೀ ಚೇತನ ಎಸ್ ಜೋಗನ್ನವರ ನಿರ್ದೇಶಕರು ಅಥರ್ವ ಕಾಲೇಜ್ ನಾಗನೂರು ಇವರು ಮಾತನಾಡಿ ಇಂದಿನ ಮಕ್ಕಳು ನಾಳೆಯ ನಾಗರಿಕರು ಅಂತ ಮಕ್ಕಳಿಗೆ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಅಗತ್ಯವಾಗಿ ನೀಡಬೇಕು. ಯಾವ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಮೂಡಲಗಿಯ ಲಯನ್ಸ್ ಎಜುಕೇಶನ್ ಸೊಸೈಟಿ ತನ್ನ ಅಂಗ ಸಂಸ್ಥೆಗಳ ಮೂಲಕ ಈ ಕಾರ್ಯವನ್ನು ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀಮತಿ ಸುನಿತಾ ವೀರಣ್ಣ ಹೊಸೂರು ವಹಿಸಿದ್ದರು.ಈ ಕಾರ್ಯಕ್ರಮದ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀ ಶಿವು ಈರಣ್ಣ ಹೊಸೂರ.ಆರ್ ಆರ್ ಮೇದಗೊಪ್ಪ ಪ್ರಾಚಾರ್ಯರು ವಿ ಬಿ ಎಸ್ ಎಮ್ ಶಾಲೆ ಇವರು ಮಾತನಾಡಿ, ಇಂದು ಈ ವೇದಿಕೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು ಮುಂದೆ ರಾಜ್ಯ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಮಿಂಚಲಿ ಎಂದು ಆಶಿಸಿದರು.
ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಂಟನೆಯ ವರ್ಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು,. ಶಾಲೆಯ ಮುಖ್ಯೋಪಾಧ್ಯಯರಾದ ರಾಜು ತಳವಾರ ಸ್ವಾಗತಿಸಿದರು ಶಿಕ್ಷಕರಾದ ಡಿ ಎಸ್ ಒಡೆಯರ ವರದಿ ವಾಚಿಸಿದರು.ದೀಪಾ ಮೆಳವಂಕಿ ವಂದಿಸಿದರು ವಿದ್ಯಾರ್ಥಿನಿಯರಾದ ಪ್ರಿಯಾಂಕ ಮಾನಗಾವಿ ಸಿದ್ದವ್ವ ಹಂಜಿ ನಿರೂಪಿಸಿದರು ಶಾಲೆಯ ಶಿಕ್ಷಕ ಸಿಬ್ಬಂದಿಯಾದ ಪ್ರಜ್ವಲ ಕುಮಾರ ಕಳ್ಳಿಗುದ್ದಿ ವೆಂಕಟೇಶ ಕಮಲ ಭೂಮಿಕಾ ಮೆಳವಂಕಿ ಅನಿತಾ ಸತರಡ್ಡಿ ರಚನಾ ಬಡಿಗೇರ ಐಶ್ವರ್ಯ ಕೋತ ಹಾಗೂ ವಿದ್ಯಾರ್ಥಿಗಳು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವರದಿ ಮುರಿಗೆಪ್ಪ ಮಾಲಗಾರ