ಕುಡಚಿ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಬಕ್ರೀದ್ ಆಚರಣೆ

Share the Post Now

ಬೆಳಗಾವಿ.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಮುಸ್ಲಿಂ ಬಾಂಧವರು ತ್ಯಾಗ- ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶನಿವಾರ ಶ್ರದ್ಧಾ, ಭಕ್ತಿಗಳಿಂದ ಆಚರಿಸಿದರು.

ಕುಡಚಿ ಪಟ್ಟಣದ ಕೃಷ್ಣಾ ನದ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸಾಮೋಹಿಕ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ನಿಮಿತ್ತ ಹೊಸ ಬಟ್ಟೆ ತೊಟ್ಟು  ಪ್ರಾರ್ಥನೆ ಸಲ್ಲಿಸಿ ಕೈಕುಲುಕುವ ಮೂಲಕ ನಂತರ ಪರಸ್ಪರ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಪಟ್ಟಣದ ಎಲ್ಲ ಮಸೀದಿಗಳಲ್ಲಿ ಇಂದು ಬೆಳಗ್ಗೆ ವಿಶೇಷ ಪ್ರಾರ್ಥನೆಗಳು ಸಲ್ಲಿಸಿ ದೇವರ ಮಹಿಮೆಯನ್ನು ಆಲಿಸಿದರು. ಜಾಗತಿಕ ಶಾಂತಿ- ಸಾಮರಸ್ಯವನ್ನು ದೇವರಲ್ಲಿ ಬೇಡಿಕೊಂಡು ಧರ್ಮ ಗುರುಗಳು ಪ್ರವಚನ ಆಲಿಸುವುದರೊಂದಿಗೆ ಆದರ್ಶಗಳ ಪಾಲನೆಗೆ ಕರೆ ನೀಡಿದರು.

ಹಬ್ಬದ ನಿಮಿತ್ತ ನೆರೆಹೊರೆಯವರಿಗೆ ದಾನ ಮಾಡಿ,  ಕುಟುಂಬಸ್ಥರು, ಸಂಬಂಧಿಕರು, ವಿಶೇಷ ತಿಂಡಿ- ತಿನಿಸು ಹಾಗೂ ಭೋಜನದ ಸವಿದರು.

ಪಟ್ಟಣದ ಈದ್ಗಾ ಮೈದಾನ, ದರ್ಗಾಗಳು ಹಾಗೂ ಮಸೀದಿಗಳ ಅಕ್ಕಪಕ್ಕ ಜಾತ್ರೆಯ ಕಳೆ ಕಂಡು ಬಂತು

Leave a Comment

Your email address will not be published. Required fields are marked *

error: Content is protected !!