ಬೆಳಗಾವಿ
ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಅಜಿತ ಬಾನೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ದೈಹಿಕ ಪರಿವೀಕ್ಷಕರಾದ ಎಂ.ಬಿ.ಜಿರಗ್ಯಾಳ ಮಾತನಾಡಿ ನಾನು 53ಶಾಲೆಗಳನ್ನು ಭೇಟಿ ನೀಡಿದ್ದು ಅದರಲ್ಲಿ ಎರಡೆ ಜನ ಶಿಕ್ಷಕರು ಹಿಂದೆ ಇದ್ದಾರೆ ನಮ್ಮ ಕೆಲಸಕಾರ್ಯಗಳಲ್ಲಿ ನಾವು ನಿರತರಾದರೆ ಮೇಲಾಧಿಕಾರಿಗಳಿಗೆ ಹೆದರಬೇಕಾಗಿಲ್ಲ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಸಹ ಶಿಕ್ಷಕರು ಇದ್ದರೆ ಶಾಲೆ ಪರಿಪೂರ್ಣವಾಗುತ್ತದೆ.
ತಾಲೂಕಿನಲ್ಲಿ 27ಮಕ್ಕಳು ರಾಷ್ಟ್ರ ಮಟ್ಟಕ್ಕೆ ಹೋಗಿದ್ದು ಇದು ನಮಗೆ ಹೆಮ್ಮೆ ಎಂದರು ಪ್ರಾಯೋಗಿಕವಾಗಿ ಪ್ರಬಧ್ಧರಾಗಿದ್ದೀರ ಥೆರಾಟಿಕಲ ಚೆನ್ನಾಗಿ ಇದ್ದರೆ ಪರಿಪೂರ್ಣವಾಗುತ್ತದೆ. ನಾವು ನಮ್ಮ ಕಾರ್ಯದಲ್ಲಿ ಸೈನಿಕರಂತೆ ಕಾರ್ಯಪ್ರವೃತ್ತರಾಗಿ ತೊಡಿಗಿಕೊಳ್ಳಬೇಕು ನಾವು ಪ್ರಾಮಾಣಿಕವಾಗಿ ಇದ್ದರೆ ಯಾರಿಗೂ ಅಂಜುವ ಅವಶ್ಯಕತೆ ಇಲ್ಲ ಎಂದರು.
ಈ ಸಮಯದಲ್ಲಿ ಎಸ.ಬಿ.ಜಿರಗ್ಯಾಳ ರು, ಸಂತೋಷ ಬಿರಾಜ್, ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ, ಬಾಬಾಲಾಲ ಪಿನಿತೋಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ವಿಷ್ಣು ಆರಗೆ, ದೈಹಿಕ ಶಿಕ್ಷಕರ ಅಧ್ಯಕ್ಷ ಜಮಾದಾರ, ಉಪಾಧ್ಯಕ್ಷ ಶಿವಾನಂದ ಆರಗೆ, ಝಡ್ ಆರ. ಮುಲ್ಲಾ, ಸಂಪನ್ಮೂಲ ವ್ಯಕ್ತಿಗಳಾದ ಅಲ್ತಾಫ್ ಬಾಗೆ, ಇಕ್ಬಾಲ್ ಉಮರಖಾನ ಹಾಗೂ ತಾಲೂಕಿನ ದೈಹಿಕ ಶಿಕ್ಷಕರು ಭಾಗಿಯಾಗಿದ್ದರು.
