ಬೆಳಗಾವಿ : ಬುಧವಾರ ನಗರದ ಮಹಾನಗರ ಪಾಲಿಕೆಯ ಪರಿಷತ್ ಭವನದಲ್ಲಿ ನಡೆದ ಪರಿಷತ್ ಸಭೆಯು ಆಡಳಿತ ಪಕ್ಷದ ಅಧ್ಯಕ್ಷ ರಾಜಶೇಖರ ಡೋಣಿ ಮತ್ತು ವಿರೋಧ ಪಕ್ಷದ ನಾಯಕ ಮೂಜಾಮ್ಮಿಲ್ ದೋನಿ ಎಂಬ ಇಬ್ಬರ ದೋನಿಗಳ ಮೇಲೆ ಗಲಾಟೆ ಸಂಧಾನಗಳ ಮೂಲಕ ಜರುಗಿದೆ..
ನಿಗಧಿತ ಸಮಯಕ್ಕೆ ಸರಿಯಾಗಿ ಸಭೆ ನಡೆಯದ ಕಾರಣ, ವಿರೋಧ ಪಕ್ಷದವರು ಮಹಾಪೌರ ಮತ್ತು ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು..
ಮೊದಲಿಗೆ ಪಾಲಿಕೆ ಪರಿಷತ್ತಿನ ವಿರೋಧ ಪಕ್ಷದ ನಾಯಕನ ನೇಮಕಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಸ್ತಾವನೆ ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳ ಸೂಚನೆ ಪಡೆದುಕೊಂಡು, ವಿರೋಧ ಪಕ್ಷದ ಎಲ್ಲಾ ಸದಸ್ಯರ ಸಮ್ಮತಿ ಪಡೆದು ಮುಜಮ್ಮಿಲ್ ಧೋನಿ ಅವರನ್ನು ನೇಮಕ ಮಾಡಲಾಯಿತು..
ಪಾಲಿಕೆಯಿಂದ ನೀಡುವ ನೋಟಿಸ್ ಭಾಷೆಗಾಗಿ ಅಂದರೆ ಮರಾಠಿ ಭಾಷೆಯಲ್ಲಿ ನೋಟಿಸ್ ನೀಡಬೇಕು ಎಂದು ಎಂಇಎಸ್ ನಗರ ಸೇವಕರು ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಿದ್ದಂತೆ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ವಾದ ವಿವಾದ ಮಾಡುತ್ತಾ, ಮೂರು ಸದಸ್ಯರು ಧರಣಿ ಕುಳಿತು, ಕೆಲಹೊತ್ತು ಪರಿಷತ್ ಸಭೆ ಗದ್ದಲ ಹಾಗೂ ಗೊಂದಲದ ಗೂಡಾಗಿತ್ತು, ಕೊನೆಗೆ ಬೆಳಗಾವಿ ಉತ್ತರದ ಮತ್ತು ದಕ್ಷಿಣದ ಶಾಸಕರ ನಡುವೆ ಅನುಭವದ ವಿಷಯವಾಗಿ ವಾಗ್ವಾದವೆ ನಡೆಯಿತು..
ಕೊನೆಗೆ ಧರಣಿ ಕುಳಿತ ಸದಸ್ಯರು ತಮ್ಮ ಸ್ಥಳಕ್ಕೆ ತೆರಳಿ, ಕ್ಷಮಾಪಣೆ ಕೇಳಿದ ನಂತರ ಮುಂದೆ ತಮ್ಮ ಭಾಷೆಯಲ್ಲಿ ನೋಟಿಸ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು, ಮಹಾಪೌರರು ಆಶ್ವಾಸನೆ ನೀಡಿದರು, ಇನ್ನೂ ನೋಟಿಸ್ ಗಳನ್ನು ಸ್ವೀಕರಿಸದೇ ಇರುವ ಹಿನ್ನೆಲೆಯಲ್ಲಿ, ಅವರ ಮನೆಯ ಬಾಗಿಲಗೆ, ಹಾಗೂ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದೇವೆ ಎಂದರು..
ಇನ್ನು ಸದಸ್ಯರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಕುರಿತಾಗಿ, ಶಾಸಕರು ಹಾಗೂ ವಿರೋಧ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಅಧಿಕಾರಿಗಳು ತಬ್ಬಿಬ್ಬಾದರು, ಸಭೆಗೆ ಸರಿಯಾದ ಮಾಹಿತಿ ನೀಡದೇ ಗೊಂದಲಕ್ಕೆ ಒಳಗಾದರು, ಇದರ ಕುರಿತಾಗಿ ಮತ್ತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯ ಗಲಾಟೆ ನಡೆದು, ಕೊನೆಗೆ ಮಹಾಪೌರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು..
ಉತ್ತರದ ಶಾಸಕರಾದ ರಾಜು ಶೇಟ್ ಮಾತನಾಡಿ, ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬಗ್ಗೆ ಗೌರವ ಇರಲಿ, ಎಲ್ಲರನ್ನೂ ವರ್ಗಾವಣೆ ಮಾಡುವದು ಸರಿಯಲ್ಲ, ನೋಡಿ ಕೆಲಸದಲ್ಲಿ ಬಹಳ ದುರುಗಳಿದ್ದರೆ ಆಗ ಮಾಡಿ ಎಂಬ ಸಲಹೆ ನೀಡಿದರು..
ಇನ್ನು ದಕ್ಷಿಣದ ಶಾಸಕ ಅಭಯ್ ಪಾಟೀಲ್ ಅವರು ಮಾತನಾಡಿ, ತಮ್ಮದೇ ಸರ್ಕಾರದ ಮಂತ್ರಿಗಳು ಪತ್ರ ಬರೆದ ಪ್ರಕಾರ ಹಾಗೂ ಉಸ್ತುವಾರಿ ಸಚಿವರ ವಿಚಾರದಂತೆ ಈಗ ವರ್ಗಾವಣೆ ಸುದ್ದಿಗಳು ಹರಿದಾಡುತ್ತಿವೆ, ಕಾನೂನು ಅಧಿಕಾರಿಯ ಸಲಹೆ ಪಡೆದು, ತಾವು ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು, ಇಲ್ಲವಾದರೆ ಸಚಿವರಿಗೆ ಅವರ ಪಾತ್ರ ವಾಪಸ್ ಪಡೆಯಲು ಹೇಳಿ, ಈ ವರ್ಗಾವಣೆಯ ಪ್ರಕ್ರಿಯೆಯನ್ನು ನಿಲ್ಲಿಸಿಬಿಡಿ ಎಂದು ಮಹಾಪೌರರಿಗೆ ಮನವಿ ಮಾಡಲಾಯಿತು..
ಇನ್ನು ಪಾಲಿಕೆಯ ಸದಸ್ಯ ಅಜೀಂ ಮಾತನಾಡಿ, ಜನರಿಗೆ ತೊಂದರೆ ನೀಡುವ, ಎಲ್ಲರ ಮೇಲೆ ನಿಯಂತ್ರಣ ಹೇರುವ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂಬ ಆಶಯ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ಅಭಿಪ್ರಾಯವಾಗಿದೆ ಎಂದರು..
ಇನ್ನು ಪಾಲಿಕೆಯಲ್ಲಿ ಹೊರ ಗುತ್ತಿಗೆಯ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾಟಾ ಆಪರೇಟರ್ ಹುದ್ದೆಗಳ ಗುತ್ತಿಗೆಯನ್ನು ಕಿಯೋನಿಕ್ಸ್ ಸಂಸ್ಥೆಗೆ ನೀಡುವ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು.
ಇನ್ನು ಪಾಲಿಕೆಯಿಂದ ಒಬ್ಬ ಪಾಲಿಕೆಯ ನಗರ ಸೇವಕರನ್ನು ಬುಡಾ ಸದಸ್ಯರಾಗಿ ನೇಮಕ ಮಾಡುವ ಪದ್ಧತಿ ಇದ್ದು, ಅದಕ್ಕಾಗಿ ರಾಮತೀರ್ಥ ನಗರದ, ಹಣಮಂತ ಕೊಂಗಾಲಿ ಎಂಬ ನಗರ ಸೇವಕರನ್ನು ಆಯ್ಕೆ ಮಾಡಿ ಅನುಮೋದನೆ ಮಾಡಲಾಯಿತು..
ಈ ಪರಿಷತ್ ಸಭೆಯಲ್ಲಿ ಮಹಾಪೌರ, ಉಪಾಮಹಪೌರ, ಶಾಸಕರು, ನಗರ ಸೇವಕರು, ಪಾಲಿಕೆಯ ಆಯುಕ್ತರು, ಕಾನೂನು ಅಧಿಕಾರಿ, ಪಾಲಿಕೆಯ ಇನ್ನುಳಿದ ಸಿಬ್ಬಂದಿಗಳು, ಇತರ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು..