ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬುಧವಾರದಂದು ಬೇಧ ಭಾವ ಮಾಡದೆ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಿರಸಾಭ ದರ್ಗಾ ದಿಂದ ದೇವರ ಡೊಲಿಯನ್ನು ಹೊರಗೆ ತಂದರು ಬಕ್ತರು ಲಾಲ್ ಸಾಬ್ ಕಿ ದೋಸ್ತ್ರಾ ದಿನ್ ಅನ್ನುತ್ತಾ ದೇವರ ಡೋಲಿಯ ಮೇಲೆ ಕಾರಿಕ್,
ಬೆಂಡು ಬತ್ತಾಸು ಬಿಸ್ಕಿಟ್ಟ ಹಾರಿಸಿ ಹರಕೆ ತೀರಿಸಿದರು.ಗ್ರಾಮದ ಯುವಕರು ಖತಾಲಗಳ ಅನೇಕ ತಂಡದವರು ಹೆಜ್ಜೆ ಹಾಕುತ್ತಾ, ಕರಬಲ್ ಆಡುತ್ತಾ ಹೆಜ್ಜೆ ಕುಣಿತ ಲೇಜಿಮ್ ಕುಣಿತ, ಹಗ್ಗದ ಆಟ, ಬಾರಕೋಲ ಬಡಿತ,ತಾಳ ಬಡಿತ ಹೀಗೆ ಬೆರೆ ಬೆರೆ ಮನರಂಜನೆಯನ್ನು ಪ್ರದರ್ಶಿಸಿದರು.
ಭವ್ಯವಾದ ಮೆರವಣಿಗೆ ನಡೆಯಿತು. ನಂತರ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ದೇವರು ಎಬ್ಬಿಸಿ ವರ್ಷದ ಮಳೆ ಬೆಳೆ ಒಳ್ಳೇದು,ಕೆಟ್ಟದ್ದು ಹೇಳುವ ನುಡಿಗಳು ನಡೆದವು. ನಂತರ ದೇವರುಗಳನ್ನು ಬಾವಿಗೆ ಕಳುಹಿಸುವುದರ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಮೊಹರಂ ಹಬ್ಬದ ಆಚರಣೆಯಲ್ಲಿ ಸಹಸ್ರಾರು ಭಕ್ತರು ಹಾಗೂ ಹಿಂದೂ – ಮುಸ್ಲಿಂ ಸಮಾಜದ ಪ್ರಮುಖರು ಭಾಗವಹಿಸಿದ್ದರು.