ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ :ಪಿ.ರಾಜೀವ ಗುದ್ದಲಿಪೂಜೆ

Share the Post Now

ಬೆಳಗಾವಿ. ರಾಯಬಾಗ


ಹಾರೂಗೇರಿ:ಪಟ್ಟಣದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಬೆಳಗಾವಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ 9.10 ಕೋಟಿ ರೂಗಳ ಅನುದಾನದಲ್ಲಿ ಉನ್ನತೀಕರಿಸುವ ಕಾಮಗಾರಿಗೆ ಕುಡಚಿ ಶಾಸಕ ಪಿ ರಾಜೀವ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಂತರ ಶಾಸಕ ಪಿ ರಾಜೀವ ಮಾತನಾಡಿ ಚಿಕ್ಕ ಮಕ್ಕಳ, ಮಹಿಳೆಯರ ಹೆರಿಗೆ ಹೀಗೆ ವಿವಿಧ ಅರ್ಹತೆ ಪಡೆದ ವೈದ್ಯರು ಲಭ್ಯವಿರುವ 30 ಹಾಸಿಗೆಯುಳ್ಳ 2 ಅಂತಸ್ಥಿನ ಕಟ್ಟಡ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ 100 ಹಾಸಿಗೆ ಕಟ್ಟಡ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಿವಗೊಂಡ ಧರ್ಮಟ್ಟಿ ಬಸನಗೌಡ ಆಸಂಗಿ, ಡಿ. ಸಿ. ಸದಲಗಿ, ಹಣಮಂತ ಯಲಾಶೆಟ್ಟಿ, ಕಾಂತು ಬಾಡಗಿ, ಬಸವರಾಜ ಖೋತ, ರಾಜು ಅರಳಿಕಟ್ಟಿ, ವಸಂತ ಲಾಳಿ, ಶಿವಾನಂದ ದಳವಾಯಿ, ಸಂತೋಷ ಶಿಂಗಾಡಿ, ರಾಜು ಅಸ್ಕಿ,ಹಣಮಂತ ಅಥಣಿ, ವೈದ್ಯಾಧಿಕಾರಿ ಡಾ. ಸುಮಿತ್ ಪಾಟೀಲ, ತಾಲೂಕಾ ಆರೋಗ್ಯಧಿಕಾರಿ ಸೋಮಶೇಖರ ಪಾಟೀಲ, ಡಾ. ಸಂದೀಪ ಕಣಕಿಕೋಡಿ, ಡಾ. ಚೈತ್ರಾ ಬೋಸಲೆ, ಡಾ. ಸೋಹನ ಚೌಹಾನ, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲು ಆಸಂಗಿ, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!