ಬೆಳಗಾವಿ. ರಾಯಬಾಗ
ಹಾರೂಗೇರಿ : ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಹಾ. ವಿ ಆವರಣದ ಅಂಗ ಸಂಸ್ಥೆಗಳಾದ, ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಎಸ್ ಬಿ ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕಲಾ ವಿಜ್ಞಾನ, ವಾಣಿಜ್ಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ,
ಎಸ್ ಪಿ ಎಮ್ ಶಿಕ್ಷಣ ಮಹಾವಿದ್ಯಾಲಯ, ಹಾ ವಿ ಶಿಕ್ಷಕರ ತರಬೇತಿ ಕೇಂದ್ರ ಹಾರೂಗೇರಿ, ಇವುಗಳ ಸಂಯುಕ್ತ ಆಶ್ರಯದಲ್ಲಿ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಸಂಸ್ಥೆಯ ಚೇರಮನರಾದ ಸನ್ಮಾನ್ಯ ಶ್ರೀ ಬ್ಯಾರಿಸ್ಟರ ಅಮರಸಿಂಹ ವ ಪಾಟೀಲರು ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿದರು.
ಡಾ. ಎಸ್ ಎಮ್ ಹೆಳವರ ಹುತಾತ್ಮ ಸಿದಗೌಡ ಪಾಟೀಲ್ ಹಾಗೂ ಹಾಗೂ ಸನ್ಮಾನ್ಯ ಶ್ರೀ ವಸಂತಾರಾವ ಪಾಟೀಲ ( ಅಭಾ )ಅವರನ್ನು ಸ್ಮರಿಸಿದರು. ಧ್ವಜಾರೋಹಣ ಉದ್ದೇಶಿಸಿ ಎಂ.ಬಿ ಪಡೆದಾರ ಸರ್ ಅವರು ಮಾತನಾಡಿ ಭಾರತದ ಸಂವಿಧಾನ ಸರ್ವಶೇಷ್ಠವಾದುದು,
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾವು ಎಲ್ಲರೂ ಬದಕು ಸಾಗಿಸೋಣ, ಸಂವಿಧಾನಕ್ಕೆ ಗೌರವ ನೀಡೋಣ, ಸಂವಿಧಾನ ಶಿಲ್ಪಿ ಅಂಬೇಡ್ಕರರ ಶ್ರಮ ಅತ್ಯಂತ ಶೇಷ್ಠವಾದುದು ಎಂದು ಹೇಳಿದರು.
ವೇದಿಕೆಯಲ್ಲಿ ಹಾ ವಿ ಆವರಣದ ಮುಖ್ಯಸ್ಥರಾದ ಹಾ ವಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೆ ಎಸ್ ಕಾಂಬಳೆ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಉಮರಾಣಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ, ಎಸ್ ಬಿ. ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎಸ್ ಎಮ ಯಲಿಗಾರ,
ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಶ್ರೀ ಬಿ. ಪಿ ಹುಲ್ಲೋಳಿ ಹಾಗೂ ಹಾ. ವಿ ಆವರಣದ ಎಲ್ಲ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಡಾ. ಎಸ್ ಎಮ್ ಹೆಳವರ ಸ್ವಾಗತಿಸಿದರು. ಡಾ. ಕುಮಾರಿ ಕೆ ಬಿ ಸ್ವಾತಿ ಮತ್ತು ಶ್ರೀ ಕೆ ಎಸ್ ಭಜಂತ್ರಿ ನಿರೂಪಿಸಿದರು. ಶ್ರೀ ಎಸ್ ಬಿ ಕಲಚಿಮ್ಮಡ ವಂದಿಸಿದರು.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ