ಬೆಳಗಾವಿ.ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ, ಡಿ ವೀರೇಂದ್ರ ಹೆಗ್ಗಡೆ ರವರು ಮಾರುತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಜೂರು ಮಾಡಿದ ಒಂದು ಲಕ್ಷ ಮೊತ್ತದ ಡಿಡಿಯನ್ನು ಯೋಜನಾಧಿಕಾರಿಯಾದ ಕಿರಣ ಎಸ್ ಸಮಿತಿಯವರಿಗೆ ವಿತರಣೆ ಮಾಡಿ ಪೂಜ್ಜ್ಯ ಡಾ, ಡಿ ವೀರೇಂದ್ರ ಹೆಗ್ಗಡೆ ರವರು ಕರ್ನಾಟಕ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಸ್ವ ಸಹಾಯ ಸಂಘಗಳನ್ನು ಮಾಡುವ ಮೂಲಕ ಕುಟುಂಬದ ಅಭಿವೃದ್ದಿಗೆ ಪೂರಕವಾಗುವ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಮತ್ತು ಸಮುದಾಯದ ಅಭಿರುದ್ದಿಗೆ ಪೂರಕವಾಗಿ ದೇವಾಲಯಗಳ ಜಿರ್ನೋದ್ದಾರಕ್ಕೆ ಸಹಾಯಧನ, ಕೆರೆಗಳ ಹೋಳೆತ್ತಲು, ಹಾಲು ಸೊಸೈಟಿಗಳ ಕಟ್ಟಡ ರಚನೆಗೆ, ಹಿಂದೂ ರುದ್ರ ಭೂಮಿ ರಚನೆಗೆ ,ಸರ್ಕಾರಿ ಶಾಲೆಗಳ ದುರಸ್ಥಿಗಳಿಗೆ ಸಹಾಯದನ ಹೀಗೆ ಸಮಾಜದ ಅಭಿವೃದ್ದಿಗೆ ಪೂರಕವಾಗಿ ಪ್ರಸಾದದ ರೂಪ ದಲ್ಲಿ ಸಹಾಯದನ ನೀಡುತ್ತಿದ್ದೂ ಸರಿಯಾಗಿ ಬಳಕೆ ಮಾಡಿಕೊಳ್ಳುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿ, ಮಾರುತಿ ದೇವಸ್ಥಾನದ ಆಡಳಿತ ಮಂಡಳಿ ಉಪಸ್ಥಿತರಿದ್ದರು.
