ಮೇಲ್ನೋಟದ ರೂಪಕ್ಕೆ ಮರುಳಾಗಬೇಡಿರಿ ಜ್ಞಾನೇಶ್ವರ ಮಹಾಸ್ವಾಮಿಗಳು

Share the Post Now

ಹಳ್ಳೂರ.

ಮೇಲ್ನೋಟದ ರೂಪ ನೋಡುವುದಕ್ಕಿಂತ ಗುಣ ನೋಡಿ ಗೆಳೆತನ ಮಾಡಿದರೆ ಜೀವನ ಸರಳ ಧಾಭಾ ಊಟವನ್ನು ಸೇವಿಸಿದೆ ಮನೆ ಊಟ ಸೇವಿಸಿರಿ ದಾಂಬಿಕ ,ತೋರಿಕೆ ಭಕ್ತಿಗೆ ದೇವರು ಮೆಚ್ಚುವುದಿಲ್ಲ ನಿಜವಾದ ಭಕ್ತಿಗೆ ದೇವರು ಒಲೆಯುತ್ತಾನೆಂದು ನಾಗರಾಳ ಜ್ಞಾನೇಶ್ವರ ಮಹಾಸ್ವಾಮಿಗಳು ಹೇಳಿದರು.  

       ಅವರು ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಸಿದ್ಧಾರೂಢ ಪರಮಾರ್ಥ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪಂಚ ಭೂತಗಳಿಂದ ಹುಟ್ಟಿದ ಶರೀರ ಪಾಪ ಕರ್ಮ ಮಾಡಿ ಕಷ್ಟ ಅನುಭವಿಸದೆ ಯಾರಿಗೂ ಕೇಡನ್ನು ಬಯಸದೆ ಪುಣ್ಯದ ಕಾರ್ಯ ಮಾಡಿ ಮಾನವ ಜನ್ಮ ಉದ್ಧಾರ ಮಾಡಿಕೊಳ್ಳಿರೆಂದು ಹೇಳಿದರು.    

      ಸಾನಿಧ್ಯ ವಹಿಸಿದ ಅನಂತಾನಂದ ಶರಣರು ಮಾತನಾಡಿ ಭಕ್ತಿ ಧ್ಯಾನ, ಧರ್ಮ ತುಂಬಿದ ಭಾರತ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ಧನ್ಯರು ತಂದೆ ತಾಯಿ ನಾಡಿನ ಕೀರ್ತಿ ಬೆಳೆಸುವಂತ ಮಕ್ಕಳಿಗೇ ಜನ್ಮ ನೀಡಬೇಕು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ  ಸಿರಿ ಸಂಪತ್ತು ನಾಶವಾಗುವ ವಸ್ತು ಧ್ಯಾನ, ಭಕ್ತಿ ವಿದ್ಯೆ ನಿಜವಾದ ಸಂಪತ್ತು ಭಕ್ತಿ ಧ್ಯಾನ ಸತ್ಯ ಧರ್ಮದ ದಾರಿಯಲ್ಲಿ ಸಾಗುವರಿಗೆ ದುಷ್ಟ ಶಕ್ತಿಗಳು ದುರಾಗುತ್ತವೆ ದೇವರು ಇಲ್ಲದ ಸ್ಥಳವಿಲ್ಲವೆಂದು ಹೇಳಿದರು.       

                       ತಿಕೋಟಾ ಶಿವಾನಂದ ಮಹಾಸ್ವಾಮಿಗಳು ಪ್ರವಚನ ಹೇಳಿದರು.                           ಡಾ ಎಂ ಬಿ ವಿಭೂತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಿಗೆಪ್ಪ ಮಾಲಗಾರ ಸ್ವಾಗತಿಸಿ ಸಿದ್ದು ದುರದುಂಡಿ ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!