ಯೋಗ ಮಾಡುವುದು ಬಹಳ ಅವಶ್ಯಕ:ಆರ್ ಕೆ ಮೇಲಗಡೆ

Share the Post Now

ಹಳ್ಳೂರ 

ಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಮಟ್ಟಗಳಂತಹ ಎಲ್ಲ ಆಯಾಮಗಳನ್ನು ಹತೋಟಿಯಲ್ಲಿಡುತ್ತದೆ ಎಂದು ಪ್ರಧಾನ ಗುರುಗಳಾದ ಆರ್ ಕೆ ಮೇಲಗಡೆ ಹೇಳಿದರು.     

                                                ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಹವು ಸಂರಕ್ಷಿಸಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಯೋಗವು ದೇಹವನ್ನು ಆತ್ಮದೊಂದಿಗೆ ಒಂದುಗೂಡಿಸುವ ಅದ್ಬುತವಾದ ನೈಸರ್ಗಿಕ ಶಕ್ತಿ.ಮಾನವನಿಗೆ ಆಂತರಿಕ ಶಾಂತಿಯನ್ನು ಪಡೆಯಲು ಯೋಗವು ಶ್ರೇಷ್ಠ ಸಾಧನೆಯಾಗಿದೆ ಎಂದು ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮಾತನಾಡಿ ಯೋಗದಿಂದ ರೋಗವು ಮುಕ್ತವಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.

ಯೋಗವು ವಿಶ್ವದ ಜನರಿಗೆ ಆರೋಗ್ಯವನ್ನು ನೀಡುವುದರಲ್ಲಿ ಆಗಾಧವಾದ ಕೊಡುಗೆಯನ್ನು ನೀಡಿದೆ. ದೇಹ ಹಾಗೂ ಮನಸ್ಸನ್ನು ಯೋಗವು ಹಿಡಿತದಲ್ಲಿಡುತ್ತದೆ. ಯೋಗದಿಂದ ಶರೀರದಲ್ಲಿ ರಕ್ತ ಪರಿಚಲನೆಯಾಗುವುದರಿಂದ ಮೆದುಳಿನ ಕಾರ್ಯ ಚುರುಕಾಗುತ್ತದೆ. ಯೋಗದಿಂದ ಆರೋಗ್ಯ ವೃದ್ಧಿಯಾಗಿ ಸಂತೃಪ್ತಿ ಜೀವನ ನಡೆಸಲು ಸಹಕಾರಿಯಾಗುತ್ತದೆ. ದಿನಾಲು ಕೆಲಸ ಕಾರ್ಯಗಳ ಒತ್ತಡ ಮದ್ಯೆ ಯೋಗವು ಮಾಡಿ ಸುಖವಾಗಿರೆಂದು ಹೇಳಿದರು.    

                                         ಈ ಸಮಯದಲ್ಲಿ  ಶಿಕ್ಷಕರಾದ ಬಿ ಜೇ ಪಾರ್ಥನಳ್ಳಿ. ರಾಮು ಹರಿಜನ.ಎಂ ಆರ್ ನದಾಫ.ಶೋಭಾ ಮುತಾರಿ.ಅಂಗನವಾಡಿ ಕಾರ್ಯಕರ್ತೆ ಗಂಗವ್ವ ಪಾಲಬಾಂವಿ.ಬಸಲಿಂಗ ಬಾಗೋಡಿ.ಸೇರಿದಂತೆ ವಿದ್ಯಾರ್ಥಿಗಳಿದ್ದರು.

Leave a Comment

Your email address will not be published. Required fields are marked *

error: Content is protected !!