ಹಳ್ಳೂರ.
ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮುರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗು ದ್ಯಾಮವ್ವ ದೇವಿಯ ಕಡೇ ವಾರದ ನಿಮಿತ್ಯ ಹಳ್ಳೂರ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಕಂಡು ಬಂದಿತ್ತು.ಮುಂಜಾನೆ ನಸುಕಿನ ಜಾವದಲ್ಲಿ ಗ್ರಾಮದ ಎಲ್ಲಾ ದೇವರಿಗೆ ಕೃಷ್ಣಾ ನದಿ ನೀರು,ಹಾಗೂ ತೋಟದ ಬಾವಿ ಬೋರವೆಲ್ ನೀರು ತಂದು ಯುವಕರು ಪುಟಾಣಿ ಮುದ್ದು ಮಕ್ಕಳು ಎಲ್ಲಾ ದೇವರಿಗೆ ನೀರುಣಿಸಿದರು. ದೇವರ ವಿಶೇಷ ಪೂಜೆ ಅಭಿಷೇಕ ನೈವೇದ್ಯ ನೆರವೇರಿಸಿದರು.ಮುರೂರು ಗ್ರಾಮದ ಭಕ್ತರು ಎಲ್ಲಾ ದೇವರಿಗೆ ತಣ ಗಡಬ ನೈವೇದ್ಯ ಅರ್ಪಿಸಿದರು.ಗ್ರಾಮದಲ್ಲಿ ಜನಸಾಗರವೇ ಹರಿದು ಬಂದಿತ್ತು.ಮುಂಜಾನೆಯಿಂದ ಸಂಜೆಯವರೆಗೆ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಭಕ್ತಿ ಗೀತೆಗಳು ಜರುಗಿದವು.