ಬೆಳಗಾವಿ.
ರಾಯಬಾಗ ತಾಲೂಕಿನ ಮರಾಕುಡಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಮರಾಕುಡಿ ಪಟಗುಂದೇಶ್ವರ ದೇವಸ್ಥಾನದಿಂದ ನೂತನ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಕುಂಭ ಮೇಳ ಆರತಿ ಡೊಳ್ಳು ಕುಣಿತ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಹಾಲಕ್ಷ್ಮೀ ದೇವಿ ಮೂರ್ತಿಯನ್ನು ತರಲಾಯಿತು.
ಬಂಡಾರ ಏರಚುತ್ತ ದೇವರ ನಾಮಸ್ಮರಣೆ ಮಾಡುತ್ತಾ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಮೇಳ ದೊಂದಿಗೆ ಭಾಗವಹಿಸಿದ್ದರು. ಈ ಸಮಯದಲ್ಲಿ ಮರಾಕುಡಿ, ಹಳ್ಳೂರ , ನೀರಲಖೋಡಿ ಗ್ರಾಮದವರು ಹಾಗೂ ಶ್ರೀ ಮಹಾಲಕ್ಷ್ಮೀ ದೇವಿ ಕಮಿಟಿಯವರಿದ್ದರು. ಮಂಗಳವಾರ ಮುಂಜಾನೆ ಶ್ರೀ ಮಹಾಲಕ್ಷ್ಮೀ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವುದು.