ಬೆಳಗಾವಿ.
ಹಳ್ಳೂರ .ಉತ್ತರ ಕರ್ನಾಟಕದಲ್ಲಿ ಶಿವರಾತ್ರಿ ಅಮಾವಾಸ್ಯೆ ಯಿಂದ ಹೋಳಿ ಹುಣ್ಣಿಮೆ ಯುಗಾದಿ ಹಬ್ಬ ಮುಗಿದು ಕಂಬಿ ಐದೇಶಿ ಮುಗಿಯುವರೆಗೆ ಮಲ್ಲಯ್ಯನಿಗೆ ಭಕ್ತಿ ಸಮರ್ಪಣೆ ಧಾರ್ಮಿಕ ಒಂದು ಹಬ್ಬವಿದ್ದಂತೆ ಗೋಚರಿಸುತ್ತದೆ. ಶಿವರಾತ್ರಿ ಅಮವಾಸ್ಯೆಯಿಂದ ಹೋಳಿ ಹುಣ್ಣಿಮೆ ದಿನದವರೆಗೆ ಗ್ರಾಮದ ಪ್ರತಿಯೊಬ್ಬ ರ ಮನೆ ಮನೆಗೆ ತೆರಳಿ ಜಂಗಮರು ಕಂಬಿ ಮಲ್ಲಯ್ಯನನ್ನು ಹೆಗಲ ಮೇಲೆ ಹೊತ್ತುಕೊಂಡು ಮಲ್ಲಯ್ಯನ ಹಾಡು ಹಾಡುತ್ತಾ ಮನೆಮನೆಗೆ ತೆರಳಿ ಪೂಜೆ ಪುನಸ್ಕಾರ ಮಾಡುವ ವಾಡಿಕೆಯಿದೆ.
ಹೋಳಿ ಹುಣ್ಣಿಮೆ ದಿನ ಕಾಮಣ್ಣನಿಗೆ ಬೆಂಕಿ ದಹನ ಮಾಡಿ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಹಳ್ಳೂರದಿಂದ ಆಂಧ್ರದಲ್ಲಿರುವ ಬ್ರಹ್ಮರಾಂಬಾ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಮೂಲಕ ಕಂಬಿ ಹೊತ್ತುಕೊಂಡು ಮಲ್ಲಯ್ಯನ ಹಾಡು ಹಾಡುತ್ತು ಪುಣ್ಯ ಕ್ಷೇತ್ರ ಶ್ರೀಶೈಲಕ್ಕೆ ತಲುಪುವರು.