ಶ್ರೀಶೈಲಕ್ಕೆ ಹೋಗಿ ಬಂದ ಕಂಬಿ ಮಲ್ಲಯ್ಯನನ್ನು, ಭಕ್ತರನ್ನು ಗ್ರಾಮದೊಳಗೆ ಬರಮಾಡಿಕೊಂಡರು

Share the Post Now

                .ಶ್ರೀಶೈಲ ಮಲ್ಲಿಕಾರ್ಜುನ, ಬ್ರಹ್ಮರಾಂಬ ದೇವರ ದರ್ಶನ  ಆಶೀರ್ವಾದ ಪಡೆದುಕೊಂಡ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಸಾವಿರಾರು ಗ್ರಾಮಸ್ಥರು ಯುಗಾದಿ ಪಾಡ್ಯ ದಿನ ಶ್ರೀಶೈಲ ದಿಂದ ಬಂದು ವರ್ಷದ ಪದ್ಧತಿ ಪ್ರಕಾರ ಕಪ್ಪಲಗುದ್ದಿ

ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಕೆಲವು ದಿನವಿದ್ದು ಗುರುವಾರ ಮುಂಜಾನೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಒಟ್ಟುಗುಡಿ ನಂತರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆರತಿ ವಿವಿಧ ವಾದ್ಯ ಮೇಳದೊಂದಿಗೆ ಶ್ರೀಶೈಲಕ್ಕೆ ಹೋಗಿ ಬಂದ ಜೋಡು

ಕಂಬಿ ಮಲ್ಲಯ್ಯ ದೇವರನ್ನು ಹಾಗೂ ಭಕ್ತರನ್ನು ಗ್ರಾಮದೊಳಗೆ ಹಿಂದಿನ ಸಾಂಪ್ರದಾಯ ಪದ್ಧತಿ ಪ್ರಕಾರ ಗ್ರಾಮದೋಳಗೆ ಬರಮಾಡಿಕೊಂಡರು. ನಂತರ ಮಂಗಳಾರುತಿ ಮಾಡಿ ಭಕ್ತರು ತಮ್ಮ ತಮ್ಮ ಮನೆಗೆ ತೆರಳಿದರು. ಭಕ್ತರು ನಾಸ್ಟಾ, ತಂಪಾದ ಪಾನಿಯ ವ್ಯವಸ್ಥೆ ಮಾಡಿದರು.

ಬರುವ ಸೋಮವಾರ ದಂದು ಕಂಬಿ ಐದೇಶಿ ಕಾರ್ಯಕ್ರಮವು ಜರುಗಲಿದೆ.                 

ವರದಿ ಮುರಿಗೆಪ್ಪ ಮಾಲಗಾರ

Leave a Comment

Your email address will not be published. Required fields are marked *

error: Content is protected !!