ಬೆಳಗಾವಿ. ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ರಂಜಾನ್ ತಿಂಗಳಲ್ಲಿ ರಾತ್ರಿ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು
ರವಿವಾರ ಮಾರ್ಚ್ 02ರಿಂದ ತಿಂಗಳ ವರೆಗೆ ಪವಿತ್ರ ರಂಜಾನ ಹಬ್ಬ ಪ್ರಾರಂಭವಾಗಲಿದ್ದು
ಪವಿತ್ರ ರಂಜಾನ ಹಬ್ಬದ ಉಪವಾಸ ಹಾಗೂ ವಿವಿಧ ಕಾರ್ಯಕ್ರಮಗಳು ಇರುವುದರಿಂದ ಕುಟುಂಬದವರು ಬೆಳಗಿನ ಜಾವ ಎದ್ದು ಉಪವಾಸಕ್ಕೆ ತಿಂಡಿ ತಿನಿಸುವ ಉಪಹಾರ ತಯಾರಿಸಿಕೊಳ್ಳಲು ವಿದ್ಯುತ್ ಅವಶ್ಯಕತೆ ಇರುತ್ತದೆ ವಿದ್ಯುತ್ ಇಲ್ಲದ ಸಮಯದಲ್ಲಿ ಹಾಗೂ ಗ್ರಾಮೀಣ ರಹವಾಸಿಗಳುಗಳಿಗೆ ತೊಂದರೆಯಾಗುತ್ತದೆ ಆದರಿಂದ ಪವಿತ್ರ ರಂಜಾನ್ ತಿಂಗಳಲ್ಲಿ ರಾತ್ರಿ ವೇಳೆ ಸಂಪೂರ್ಣ ಒಂದು ತಿಂಗಳವರೆಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಕ್ರಮವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಅವರ ನೇತೃತ್ವದಲ್ಲಿ ಎಇಇ ಆನಂದ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಶಿವಪ್ಪ ಗಸ್ತಿ, ರಾಜು ನೀಡಗುಂದಿ, ಸದಸ್ಯರಾದ ಸಾದೀಕ ರೋಹಿಲೆ, ಅಬ್ದುಲಖಾದ ರೋಹಿಲೆ, ಸಂಜೀವ ರಡರಟ್ಟಿ, ವಾಸೀಕ ಮಾರುಫ, ರಫೀಕ್ ಪಿನಿತೋಡ, ಯುವರಾಜ ಸಣ್ಣಕ್ಕಿ ಇತರರು ಉಪಸ್ಥಿತರಿದ್ದರು