ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆಯಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಭಾಗಿ.
ಶಾಸಕ ಮಹೇಂದ್ರ ತಮ್ಮಣ್ಣವರ ಡಾ. ಬಿ.ಆರ. ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ನಂತರ ಕರ್ನಾಟಕದಲ್ಲೇ ಅಂಬೇಡ್ಕರರ ಚಿತಾ ಭಸ್ಮ ಇರುವ ಸ್ಥಳವಾದ ಕುಡಚಿಯ ಡಾ.ಬಿ.ಆರ. ಅಂಬೇಡ್ಕರರ ಭವನದಲ್ಲಿ ಅವರ ಚಿತಾ ಭಸ್ಮ ಇರುವ ಸ್ಥಳಕ್ಕೆ ತೆರಳಿ ದರ್ಶನ ಪಡೆದರು.
ನಂತರ ಮಾತನಾಡಿ ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಮತದಾನ ಮಾಡುವ ಸಮಾನ ಹಕ್ಕು ನೀಡಿದ ಅಂಬೇಡ್ಕರರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಎಲ್ಲರಿಗೂ ತಮ್ಮ ಬೇಡಿಕೆಗಳನ್ನು ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಹತ್ತು ಹಲವು ಹಕ್ಕುಗಳನ್ನು ನೀಡುವ ಮೂಲಕ ಸುಖಕರ ಜೀವನವನ್ನು ಸಾಗಿಸಲು ದಾರಿ ತೋರಿದ ದೇವರು ಅಂಬೇಡ್ಕರರು ಎಂದರು.
ಭಾಸ್ಕರ ಸಾವಂತ ಮಾತನಾಡಿ ವಿಶ್ವ ಮಾನವ ಡಾ. ಬಿ.ಆರ. ಅಂಬೇಡ್ಕರ ಭಾರತ ದೇಶಕ್ಕೆ ಮಾತ್ರವಲ್ಲದೆ ಇಡಿ ವಿಶ್ವಕ್ಕೆ ಬೆಳಕಾಗಿದ್ದಾರೆ. ಅವರ ತತ್ವ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅಂಬೇಡ್ಕರರ ಈ ಅಪಾರ ಸಾಧನೆಗೆ ಅವರ ಧರ್ಮಪತ್ನಿ ರಮಾಬಾಯಿಯವರು ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಆಧಾರ ಸ್ಥಂಭವಾಗಿದ್ದು ಪ್ರೇರಣೆ ಎಂದರು.
ನಂತರ ಸಂಘಟನೆ ವತಿಯಿಂದ ವಿದ್ಯಾರ್ಥಿಗಳಿಗೆ ನೋಟಬುಕ್ ಪೆನ್ನು ವಿತರಿಸಿದರು. ರಮಾಬಾಯಿ ಮಹಿಳಾ ಸಂಘದ ವತಿಯಿಂದ ಮುಖಂಡರಾದ ಭಾಸ್ಕರ ಸಾವಂತ್ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ, ಪುರಸಭೆ ಅಧ್ಯಕ್ಷ ಹಮೀದೊದಿನ ರೋಹಿಲೆ, ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ ಮಾಲೆ, ಪಿಎಸ್ಐ ಪ್ರೀತಮ ನಾಯಿಕ, ಎಎಸ್ಐ ಸುರೇಶ ಕಲ್ಯಾಣಪೂರಕರ, ಅಣ್ಣಪ್ಪ ಮಂಗಸೂಳಿ, ನಾಮದೇವ ಮಹಾರಾಜರು, ಬುದ್ಧ ದರಬಾರೆ, ರತ್ನಂಜ ಕದ್ದು, ಮುಶ್ಫಿಕ ಜಿನಾಬಡೆ, ನಾಮದೇವ ಮದಲೆ, ಜಯಕುಮಾರ ಸನದಿ, ಪರಶುರಾಮ ಶಿಂಧೆ, ರಾಕೇಶ ಕಾಂಬಳೆ, ಪ್ರಸಾದ ಶಿಂಗೆ, ಶೇಖರ ದಳವಾಯಿ, ಶಿವಿನಂದ ಲಖನಗಾವ, ದಿಲೀಪ ಘಾಟಗೆ, ನ್ಯಾಯವಾದಿಗಳಾದ ಗಜಾನನ ಘಾಟಗೆ, ವಿಶ್ವನಾಥ ಕರಕಣ್ಣವರ ರಮಾಬಾಯಿ ಅಭಿಮಾನಿಗಳ ಬಳಗ ಇತರರು ಉಪಸ್ಥಿತರಿದ್ದರು.