ಬೆಳಗಾವಿ.
ವರದಿ:ಕೆ ಎಸ್ ಕಾಂಬಳೆ
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬೀರಪ್ಪನ ಮಡ್ಡಿಯ ತಮ್ಮ ಕಚೇರಿಯಲ್ಲಿ ಮಾಜಿ ಶಾಸಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಬುದ್ಧನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಬುದ್ಧ ಪುರ್ಣಿಮೆ ನಿಮಿತ್ಯ ಸೋಮವಾರ ತಮ್ಮ ಕಚೇರಿಯಲ್ಲಿ ಬುದ್ಧನ ಭಾವಚಿತ್ರ ಹಾಗೂ ಪ್ರತಿಮೆಗೆ ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾರೂಗೇರಿ ಪುರಸಭೆ ಅಧ್ಯಕ್ಷ ವಸಂತ ಲಾಳಿ, ಕುಡಚಿ ಪುರಸಭೆ ಸದಸ್ಯರ ದತ್ತಾ ಸಣ್ಣಕ್ಕಿ, ಮಹಾದೇವ ತೇರದಾಳ, ರಾಜಶೇಖರ ಖನದಾಳ, ಮುತ್ತುರಾಜ ಗೊಳಸಂಗಿ, ಮೌಲಾಲಿ ವಾಟೆ, ಸಚಿನ ಪ್ರಧಾನಿ, ತುಕಾರಾಮ ಪಾಟೀಲ, ಮಹಾಂತೇಶ ಯರಡೆತ್ತಿ, ಇತರರು ಉಪಸ್ಥಿತರಿದ್ದರು.