ಕುಡಚಿ ಪುರಸಭೆಯು 4 ಲಕ್ಷ ರೂ. ಉಳಿತಾಯದೊಂದಿಗೆ ಬಜೆಟ್ ಮಂಡಿಸಿದ ಅಧ್ಯಕ್ಷ ರೋಹಿಲೇ

Share the Post Now


ಬೆಳಗಾವಿ.

ರಾಯಬಾಗ ತಾಲೂಕಿನ ಕುಡಚಿ ಪುರಸಭೆಯ ಸಾಮಾನ್ಯ ಸಭೆ ಹಾಗೂ ವಾರ್ಷಿಕ ಬಜೆಟ್ ಮಂಡಿಸಲಾಯಿತು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಹಮೀದೋದಿನ ರೋಹಿಲೆ, 2024-25 ರ ಬಜೆಟ್ ಮಂಡನೆ ಮಾಡಿದರು.

ಸಭೆಯ ನಿಯಮದಂತೆ ಮೊದಲಿಗೆ ಪಿ.ಎ. ಕಲ್ಯಾಣಶೆಟ್ಟಿ ಹಿಂದಿನ ಸಭೆಯ ಗೊತ್ತುವಳಿ  ಓದಿದರು.

ಕರ್ನಾಟಕ ಪೌರ ಸಭೆಗಳು ಅಧಿನಿಯಮ ಪ್ರಕಾರ, 2024-25ನೇ ಸಾಲಿಗೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ಆಸ್ತಿ ತೆರಿಗೆಯನ್ನು ಶೇಕಡಾ ಮೂರು ರಷ್ಟು ಹೆಚ್ಚಿಸಲು ಒಪ್ಪಿಗೆ ಹಾಗೂ ಇತರರ ವಿಷಯಗಳ ಕುರಿತು ಮಂಡನೆ ಮಾಡಿದರು, 

ನಂತರ ಅಧ್ಯಕ್ಷರ ಅಪ್ಪಣೆ ಮೇರೆಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.



ಇದೆ ಸಮಯದಲ್ಲಿ ಮಾಜಿ ಅಧ್ಯಕ್ಷ ಹಾಲಿ  ಸದಸ್ಯ ದತ್ತಾ ಸಣ್ಣಕ್ಕಿ ಮಾತನಾಡಿ ಪ್ರತಿ ವರ್ಷ ಬೆಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರನ ಸಮಸ್ಯೆ ಪರಿಹಾರವಾಗಿ  ಪರ್ಯಾಯ ನೀರಿನ ಪೈಪ್ಲೈನ್ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡಿದ ಶಾಸಕರಿಗೆ ಅಭಿನಂದನೆ ಹೇಳುತ್ತೆನೆ ಆದರೆ ಕೆಲಸ ಆರಂಭವಾಗಿ ಒಂದು ವರ್ಷವಾದರೂ ಇನ್ನೂ ಮುಗಿಯದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗೆ 1 ಲಕ್ಷ ರೂ. ಅನುದಾನ ನೀಡುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು.  ಆಗ ಉತ್ತರಿಸಿದ ಅಧಿಕಾರಿಗಳು ಅನುದಾನ ಹಂತ ಹಂತವಾಗಿ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿದ್ದು ಬರುವ ಹತ್ತು ದಿನಗಳಲ್ಲಿ ಮುಗಿಸುವುದಾಗಿ ಅಧ್ಯಕ್ಷರು ಉತ್ತರಿಸಿದರು. ಸರ್ಕಾರ ನಿಗದಿಪಡಿಸಿದಂತೆ ಪ್ರತಿ ವರ್ಷ ಇಪ್ಪತ್ತು ಸಾವಿರ ಮಂಜೂರಾಗಿದೆ ಎಂದು ಎಸ್.ಬಿ.ಕದಮ ತಿಳಿಸಿದರು.

“ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿ ಹಲವು ಯೋಜನೆಗಳು.

1.ಬೆಳಕು ಯೋಜನೆಯಡಿ ಬೀದಿ ದೀಪ ಕಂಬಗಳ ಕಾಮಗಾರಿಗಾಗಿ ರೂ.10 ಲಕ್ಷ,
2. ಬೀದಿ ದೀಪಗಳ ಸ್ವಯಂ ನಿಯಂತ್ರಿತ ಬಂದ-ಚಾಲು  ವ್ಯವಸ್ಥೆ-ರೂ. 5 ಲಕ್ಷ,
3.ಸ್ಟಾರ್ಸ್ ಆಫ್ ಕುಡಚಿ ಯೋಜನೆಯಡಿ ಕ್ರೀಡೆ, ಶಿಕ್ಷಣ ಮತ್ತು ಇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರೋತ್ಸಾಹ  ರೂ.6ಲಕ್ಷ,
4. ಪಟ್ಟಣದ ವೃದ್ಧರು, ಮಹಿಳೆಯರು ಮತ್ತು ಮಕ್ಕಳ ವಿವಿಧ ಆರೋಗ್ಯ ಶಿಬಿರ ಆಯೋಜನೆಗಾಗಿ ರೂ.4ಲಕ್ಷ,  5.ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸ್ಪೀಕರ್‌ಗಳನ್ನು ಅಳವಡಿಸಲು ರೂ.10 ಲಕ್ಷ,
6. ಪುರಸಭೆ ಕಚೇರಿಗೆ ಸೌರಶಕ್ತಿ ಇನ್ವರ್ಟರ್‌ಗಳನ್ನು ಒದಗಿಸಲು ರೂ. 10,
7. ಸ್ವಚ್ಛ ಕುಡಚಿ ಯೋಜನೆಯಡಿಯಲ್ಲಿ ವಾಣಿಜ್ಯ ಮತ್ತು ಗೃಹಬಳಕೆಯ ಮನೆಗಳಿಗೆ ಕಸದ ತೊಟ್ಟಿ ವಿತರಿಸಲು ರೂ.7.5ಲಕ್ಷ,  
8. ಬೀದಿ ನಾಯಿಗಳ ಸಂರಕ್ಷಣೆಗಾಗಿ  ರೂ.5 ಲಕ್ಷ,  ಸೇರಿದಂತೆ ಪಟ್ಟಣ ಪಂಚಾಯತಿಯಿಂದ ಪುರಸಭೆಯಾದ ನಂತರ ಹೊಸದಾಗಿ ವಿಭಜಿತವಾದ 8, 21, 22 ಮತ್ತು 23 ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು
ಹೆಚ್ಚುವರಿಯಾಗಿ ಯೋಜನೆಗಳನ್ನು ನೀಡುವುದರೊಂದಿಗೆ ಒಟ್ಟು ನಾಲ್ಕು ಲಕ್ಷ ಉಳಿತಾಯ ಬಜೆಟ್ ಅಧ್ಯಕ್ಷ ಹಮಿದೋದಿನ ರೋಹಿಲೆ ಸದಸ್ಯರ ಮುಂದೆ ಮಂಡನೆ ಮಾಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಹಮೀದೋದಿನ್ ರೋಹಿಲೆ, ಉಪಾಧ್ಯಕ್ಷ ಶಿವಪ್ಪ ಗಸ್ತಿ,  ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಸದಸ್ಯರಾದ ದತ್ತಾ ಸಣ್ಣಕ್ಕಿ,  ಇಮಾಮುದ್ದೀನ್ ಸಜ್ಜನ್, ಸಾಧಿಕ್ ರೋಹಿಲೆ, ವಾಸಿಕ್ ಮಾರುಫ, ಮೋಹನ್ ಲೋಹಾರ, ಮೈಹೆಬೂಬ್ ಜಾತಗಾರ, ಸಾಕಿಬ ಪಾಳೇಗಾರ, ಮಾಧುರಿ ನಿಡುಗುಂಡಿ, ಮೊಹಶೀನ ಮಾರುಫ್, ಅಭಿಯಂತರರಾದ ಎಸ.ಆರ.ಚೌಗಲಾ, ಪ್ರಭಾರಿ ಆರ.ಐ. ಪಿ.ಎ.ಕಲ್ಯಾಣಶೆಟ್ಟಿ, ಸಮುದಾಯ ಸಂಘಟನಾ ಅಧಿಕಾರಿ  ಎಸ್.ಬಿ. ಕದಂ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ

Leave a Comment

Your email address will not be published. Required fields are marked *

error: Content is protected !!