ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆ ಅಜೀತ ಬಾನೆ ಶಾಲೆಯ ಮಕ್ಕಳನ್ನು ಪುಷ್ಪಾರ್ಚನೆ ಹಾಗೂ ಶಾಲಾ ತಿಲಕ್ ಹಚ್ಚಿ ಆರತಿ ಮಾಡಿ ಬರಮಾಡಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವ ಮಾಡಿದರು.
ಪ್ರಾರಂಭೋತ್ಸವ ದಿನ ತರಗತಿ ಮುಂದೆ ರಂಗೋಲಿ ಹಾಕಿ ತರಗತಿ ಬಾಗಿಲಗಳಿಗೆ ತೋರಣಗಳಿಂದ ಶೃಂಗರಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮಾನ್ ನಾಯಿಕ, ಹೊಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಎಸ್.ಪಿ.ಕಾಂಬಳೆ, ಲವಡೆಲ್ ಶಾಲೆಯ ಆಶಾ ಗಾಡಿವಡ್ಡರ, ಅಶೋಕ ಯಲ್ಲಟ್ಟಿ, ಭೀಮಪ್ಪ ಕೋಣೆ, ಮಲ್ಲಿಕಾರ್ಜುನ ಫುಲಾರೆ, ಆರ.ಎ.ಭಾವಿ, ಶಿವಾನಂದ ಭಾವಿ, ಅರ್ಚನಾ ನಾಗರೇಶಿ, ಸವನೂರ ಸರ, ಹೊನ್ನಾಕಟ್ಟಿ ಸರ, ಘಂಟಿ ಸರ, ನಾಗನೂರ ಸರ ಭಜಂತ್ರಿ ಸರ ಶಿಕ್ಷಕ ಸಿಬ್ಬಂದಿ, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
