ಬೆಳಗಾವಿ.ಕುಡಚಿ
ಕುಡಚಿ ಪಟ್ಟಣದ ಪಿಎಂ ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡ ಕುಡಚಿ ಕ್ಲಸ್ಟರ ಮಟ್ಟದ ಶಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಕಲಿಯಲು ನೆರವಾಗುತ್ತವೆ ಎಂದು ಸಿಆರಪಿ ಇಕ್ಬಾಲ್ ಉಮರಖಾನ ಹೇಳಿದರು.
ಕುಡಚಿ ಪಟ್ಟಣ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬದಲ್ಲಿ ಪಟ್ಟಣದ ಪಿಎಂ ಶ್ರೀ ಶಾಸಕರ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಹೆಣ್ಣು ಮಕ್ಕಳ ಶಾಲೆ, ಮರಾಠಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಕಿರಿಯ ಪ್ರಾಥಮಿಕ ಶಾಲೆ ಜಾತಗಾರ ಗಲ್ಲಿ, ಕಿರಿಯ ಪ್ರಾಥಮಿಕ ಶಾಲೆ ಶಾಮ ನಗರ ಶಾಲೆಗಳ 1-5 ನೇ ತರಗತಿಯ 110 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಿಕಾ ಹಿಂದುಳಿದ ಮಕ್ಕಳಿಗೆ ಗಟ್ಟಿ ಓದುವುದು, ಕಥೆ ಹೇಳುವುದು, ಬರವಣಿಗೆ, ಸಂತಸ ಗಣಿತ, ಮೆಂಟಲ್ ಎಬಿಲಿಟಿ ಪರೀಕ್ಷೆ, ಚಿತ್ರ ನೋಡಿ ಕಥೆ ಕಟ್ಟುವುದು, ರಸಪ್ರಶ್ನೆ ಕಾರ್ಯಕ್ರಮ ಒಳಗೊಂಡಿದ್ದವು. ನಂತರ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಪಿಎಂಶ್ರೀ ಮುಖ್ಯೋಪಾಧ್ಯಾಯ ಮೊಹ್ಮದಲಿ ಪಟೇಲ್, ಎಸಡಿಎಮಸಿ ಅಧ್ಯಕ್ಷ ಝಹೂರ ರೋಹಿಲೆ, ಜಿ.ಎಸ.ಮೇಲಗಡೆ, ಸಿಆರಪಿ ಇಕ್ಬಾಲ್ ಉಮರಖಾನ,ಎಂ.ಐ.ಮುಲ್ಲಾ, ತಾಜೀನ ಸರ, ಭೂದಗುಂಪಿ, ಅಬುಬಕರ ಪಟೇಲ್, ಹಳೆಮನಿ ಸರ, ಅಶಫಾಕ ಜಹಾಂಗೀರ, ಸಮಾಜೆ ಸರ ಇತರರು ಉಪಸ್ಥಿತರಿದ್ದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ
