69 ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳಿಗೆ ಶಾಸಕ ತಮ್ಮಣ್ಣವರ ಸಾಲದ ಚೆಕ್ಗಳ ವಿತರಣೆ

Share the Post Now

ಬೆಳಗಾವಿ. ಕುಡಚಿ.

ರಾಯಬಾಗ ತಾಲೂಕಿನ ಹಾರೂಗೇರಿ ಬೀರಪ್ಪನ ಮಡ್ಡಿ ಶಾಸಕರ ಕಾರ್ಯಾಲಯದಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)  ರಾಯಬಾಗ್ ತಾಲೂಕಿನ ಕುಡಚಿ ಮತಕ್ಷೇತ್ರದ ವ್ಯಾಪ್ತಿಯ 69 ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ಕುಡಚಿ ಶಾಸಕ  ಮಹೇಂದ್ರ ತಮ್ಮಣ್ಣವರ ವಿತರಿಸಿದರು.

ಚೆಕ್ ವಿತರಿಸಿ ಶಾಸಕ ಮಹೇಂದ್ರ ತಮ್ಮಣ್ಣನವರ ಮಾತನಾಡಿ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸಂಯೋಗದಲ್ಲಿ ಮಹಿಳಾ ಸ್ವಸಹಾಯ  ಸಂಘಗಳು  ಇದ್ದು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳು ಮುಂದಿನ ದಿನಗಳಲ್ಲಿ  ಮತ್ತಷ್ಟು ಹೆಚ್ಚಿನ ಉಳಿತಾಯವನ್ನು ಮಾಡಿ ಕುಟುಂಬ ನಿರ್ವಹಣೆಯ ಜೊತೆಗೆ ಇನ್ನುಳಿದ ಮಹಿಳೆಯರಿಗೆ ಪ್ರೇರಣೆಯಾಗಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಇಓ ಸುರೇಶ್ ಕದ್ದು, ಪ್ರದೀಪ್ ಹಲಗುಣಿ,  ತಾಲೂಕು ಪಂಚಾಯತ್ NRLM  ಸಿಬ್ಬಂದಿಗಳಾದ ಶಂಕರ್ ಕುಮಾರ್ ಸಂಜು ಹುದ್ದಾರ್, ಪ್ರತಿಭಾ ಸಾಂಬ್ರೇಕರ, ಲಕ್ಷ್ಮಿ ಮೇತ್ರಿ ಅಶ್ವಿನಿ ಮಾಳಿಗೆ. ಹಾಗೂ  ಸಂಘದ ಪದಾಧಿಕಾರಿಗಳು, ಮಹಿಳೆಯರು ಭಾಗವಹಿಸಿದ್ದರು.

ವರದಿ: ಸಂಜೀವ ಬ್ಯಾಕುಡೆ, ರಾಯಬಾಗ

Leave a Comment

Your email address will not be published. Required fields are marked *

error: Content is protected !!