ವರದಿ: ರಾಜಶೇಖರ ಶೇಗುಣಸಿ.
ಪಟ್ಟಣದ ಶ್ರೀ ರಮೇಶ ಖೇತಗೌಡರ ಅವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ ಶ್ರೀ ಯಲ್ಲಾಲಿಂಗೇಶ್ವರ ಎಜುಕೇಶನ್ & ಸೋಷಿಯಲ್ ವೇಲಪೆರ ಸೊಸೈಟಿ ಮುಗಳಖೋಡ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಬಸವರಾಜಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಬಸವರಾಜ ಕಾಂಬಳೆ, ಶಿಕ್ಷಣ ಸಂಯೋಜಕ ಎಸ್. ಆರ್. ಕಂಬಾರ, ಎಚ್.ಬಿ.ಬೆನ್ನಾಡೆ, ಬಿ.ಸಿ.ಬಾಗೆನ್ನವರ, ಬಸಪ್ಪ ಮುಗಳಖೋಡ, ರಮೇಶ ಬೆಳಕೂಡ, ಹಿರಿಯರಾದ ಬಸಗೌಡ ಖೇತಗೌಡರ ಆಗಮಿಸಲಿದ್ದಾರೆಂದು ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಖೇತಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.