ಮುಗಳಖೋಡ ದ್ವೀತಿಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಬ ನಿ ಕೂಲಿಗೊಡ ಕಾಲೇಜು ಹೆಣ್ಣು ಮಕ್ಕಳೇ ಮೇಲುಗೈ

Share the Post Now


ವರದಿ: ಪ್ರೊ ರಾಜಶೇಖರ ಶೇಗುಣಸಿ.

ಹರ್ಷಗೊಂಡ ವಿದ್ಯಾರ್ಥಿಗಳು, ಸಿಹಿ ಹಂಚಿದ ಪಾಲಕರು, ಶುಭ ಹಾರೈಸಿದ ಸಿಬ್ಬಂದಿ ವರ್ಗ.

ಬೆಳಗಾವಿ.
ಮುಗಳಖೋಡ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮತ್ತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹೆಣ್ಣು ಮಕ್ಕಳೇ ಮುಂದು ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವಿದ್ಯಾರ್ಥಿಗಳು ಮೇಲುಗೈ ಇರುವುದು ನೋಡಿದ್ದೇವೆ.

ಅದರಂತಯೇ ಪಟ್ಟಣದ ಬ. ನೀ. ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿಯೂ ಸಹ ಹೆಚ್ಚು ಜನ ವಿದ್ಯಾರ್ಥಿನಿಯರೇ ಶ್ರೇಷ್ಠತೆಯ ಸ್ಥಾನದಲ್ಲಿ ತೇರ್ಗಡೆಯಾಗಿರುವುದು ವಿಶೇಷವಾಗಿದೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ 47 ಜನ ವಿದ್ಯಾರ್ಥಿನಿಯರು ತೇರ್ಗಡೆಯಾದರೆ ಕೇವಲ 2 ಜನ ವಿದ್ಯಾರ್ಥಿಗಳು ಶ್ರೇಷ್ಠತೆಯ ಸ್ಥಾನ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿಯೂ ಸಹ 14 ಜನ ವಿದ್ಯಾರ್ಥಿನಿಯರು ಶ್ರೇಷ್ಠತೆಯ ಕಿರೀಟ ಧರಿಸಿದ್ದಾರೆ. ಇನ್ನು ಕಲಾ ವಿಭಾಗದಲ್ಲಿಯೂ ಸಹ 3 ಜನ ಶ್ರೇಷ್ಠತೆಯಲ್ಲಿ ತೇರ್ಗಡೆಯಾದರೆ ಅದರಲ್ಲಿ 2 ಜನ ವಿದ್ಯಾರ್ಥಿನಿಯರು 1 ವಿದ್ಯಾರ್ಥಿ. ಕಲಾ ಶಿಕ್ಷಣ ವಿಭಾಗದಲ್ಲಿಯೂ ಸಹ ಹೆಣ್ಮಕ್ಳೆ ಸ್ಟ್ರಾಂಗು ಗುರು ಎನ್ನುವುದನ್ನು ವಿದ್ಯಾರ್ಥಿನಿಯರು ಸಾಧಿಸಿ ತೋರಿಸಿದ್ದಾರೆ. ಒಬ್ಬಳು ವಿದ್ಯಾರ್ಥಿನಿಯರು ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆಯಾದರೆ ವಿದ್ಯಾರ್ಥಿಗಳ ಸ್ಥಾನವು ಒಂದಾಗಿದೆ.  ಹೀಗಾಗಿ ಈ ಬಾರಿಯೂ ನಮ್ಮ ಹೆಣ್ಮಕ್ಳೆ ಮೇಲು ಎಂದು ತಿಳಿಯುತ್ತದೆ.

ಒಟ್ಟು 282 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 254 ಜನ ತೆರ್ಗಡೆ ಹೊಂದಿ ಒಟ್ಟು ಕಾಲೇಜಿನ ಫಲಿತಾಂಶ 90% ರಷ್ಟಾಗಿದೆ.

ಇದರಲ್ಲಿ *ಕುಮಾರಿ ಲಕ್ಷ್ಮಿ ಚನ್ನಪ್ಪ ಮದಿಹಳ್ಳಿ 584 ಅಂಕ ಪಡೆದು 97.33 ರಷ್ಟು ಫಲಿತಾಂಶ ಹೊಂದಿ ಕಾಲೇಜಿಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೆಯ ಸ್ಥಾನ ಪಡೆದರೆ,* ಕುಮಾರಿ ತೇಜಸ್ವಿನಿ ಶಶಿಕಾಂತ ಪತ್ತಾರ್ 576 ಅಂಕ ಪಡೆದು ದ್ವಿತೀಯ ಸ್ಥಾನ, ಲಕ್ಷ್ಮಿ ಹನುಮಂತ ಸಪ್ತಸಾಗರ್ 558 ಅಂಕ ಪಡೆದು 93% ಫಲಿತಾಂಶ ಹೊಂದಿ ಮೂರನೇ ಸ್ಥಾನ ಪಡೆದು ಕುಮಾರಿ ಅಮೃತ ಭೀಮಪ್ಪ ಬಾಬಣ್ಣವರ್ 558 ಅಂಕ ಪಡೆದು 93% ರಷ್ಟು ಪ್ರತಿಶತ ಹೊಂದಿ ಮೂರನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಕಾಲೇಜಿನಲ್ಲಿ ಒಟ್ಟು ಅತ್ಯುನ್ನತವಾಗಿ 20 ಪ್ರಥಮ ಸ್ಥಾನದಲ್ಲಿ 130, ದ್ವೀತಿಯ ಸ್ಥಾನ 67 ತೃತೀಯ ಸ್ಥಾನದಲ್ಲಿ 38 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಪಾಲಕರು  ಹಾಗೂ ವಿದ್ಯಾರ್ಥಿ ವೃಂದವು ಶುಭ ಹಾರೈಸಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾದ ಡಾ. ಸಿ. ಬಿ. ಕುಲಿಗೋಡ ವಿದ್ಯಾರ್ಥಿಗಳಿಗೆ ಶಾಲು ಹೊಂದಿಸಿ ಸತ್ಕರಿಸಿ ಶುಭ ಹಾರೈಸಿದ್ದಾರೆ. ಹಾಗೂ “ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಕಟ್ಟಿರುವ ಈ ಬ.ನೀ.ಕುಲಿಗೋಡ ಶಿಕ್ಷಣ ಸಂಸ್ಥೆಯಲ್ಲಿ ಇವತ್ತು ದ್ವಿತೀಯ ಪಿಯುಸಿಯ ಎಲ್ಲ  ವಿದ್ಯಾರ್ಥಿಗಳು ಶ್ರೇಷ್ಠತೆಯಲ್ಲಿ ತೇರ್ಗಡೆ ಹೊಂದಿ ನಮ್ಮ ಕಾಲೇಜಿನ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ಎಲ್ಲ ವಿದ್ಯಾರ್ಥಿಗಳು ಉನ್ನತವಾದ ಉದ್ಯೋಗ ಗಿಟ್ಟಿಸಿಕೊಂಡು ಅವರ ಮುಂದಿನ ಭವಿಷ್ಯ ಉಜ್ವಲಾಗಿ ಬೆಳೆಯುವಂತಾಗಲಿ ಎಂದು
ಸಂಜಯ ಕುಲಿಗೊಡ  ಬೀ  ಎನ್ ಕೆ ಅಧ್ಯಕ್ಷರು ಮುಗಳಖೋಡ.


1)” ಗ್ರಾಮೀಣ ಭಾಗದ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಮ್ಮ ನಿರೀಕ್ಷೆಗೂ ಮೀರಿ ಸಾಧನೆ ಮಾಡಿರುವುದು ಸ್ವಾಗತಾರ್ಹ. ಅದರಲ್ಲಿಯೂ ಹೆಣ್ಣು ಮಕ್ಕಳು ಶ್ರೇಷ್ಠ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಪಾಲಕರು ಅವರನ್ನು ಪ್ರೋತ್ಸಾಹಿಸಬೇಕು.

ಡಾಕ್ಟರ್ ಸಿ ಬಿ ಕುಲಿಗೋಡ
ನಿಕಟ ಪೂರ್ವ ಅಧ್ಯಕ್ಷರು, ಬ ನಿ ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಗಳಖೋಡ.

ಎಂ. ಕೆ. ಬಿಳಗಿ,
ಪ್ರಾಚಾರ್ಯರು
ಬ. ನೀ. ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮುಗಳಖೋಡ.

2)” ವಿದ್ಯಾರ್ಥಿನಿಯರಲ್ಲಿ ಕಲಿಕೆಯ ಹಂಬಲ ನಿರಂತರವಾಗಿರುವುದರಿಂದ ಹೆಚ್ಚು ಜನ ಶ್ರೇಷ್ಠತೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಧುನಿಕ ಆಡಂಬರಕ್ಕೆ ಮಾರುಹೋಗುತ್ತಿರುವ ವಿದ್ಯಾರ್ಥಿಗಳು ಅಧ್ಯಯನದಿಂದ ಸ್ವಲ್ಪ ಹಿಂದುಳಿಯುತ್ತಿದ್ದಾರೆ.” ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಶ್ರೇಷ್ಠತೆಯ ದರ್ಜೆಯಲ್ಲಿ ತೇರ್ಗಡೆಯಾಗಲಿದ್ದಾರೆ.

Leave a Comment

Your email address will not be published. Required fields are marked *

error: Content is protected !!