ಧಾರವಾಡ.
ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರಣೋತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವದಲ್ಲಿ ವಿಚಾರ ಸಂಕಿರ್ಣ, ಕೌಜಲಗಿ ನಿಂಗಮ್ಮ ರಾಷ್ಟ್ರೀಯ –
ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದ ಕನ್ನಡದ ಕಣ್ಮಣಿ ಬಡವರ ಬಂದು ದಿನ ದಯಾಳು ಸಮಾಜ ಸೇವೇ ಜೊತೆಗೆ ಪತ್ರಿಕೋದ್ಯಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಮುರಿಗೆಪ್ಪ ಬ ಮಾಲಗಾರ ಆವರಿಗೆ ಕನ್ನಡ ರತ್ನ ಪ್ರಶಸ್ತಿಯನ್ನು ರವಿವಾರದಂದು ಧಾರವಾಡದ ರಂಗಾಯನ ಸಭಾ ಭವನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದೆಂದು ಲಕ್ಕಮ್ಮ ದೇವಿ ಕಲಾ ಪೋಷಕ ಸಂಘದ ಅಧ್ಯಕ್ಷ ಸಿದ್ರಾಮ ನೀಲಜಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.