ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ: ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ ಟಿ) ಕ್ಕೇ ಸೇರಿಸುವದಕ್ಕೆ ಬಿಜೆಪಿ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಇವೆರಡರ ಶ್ರೇಯಸ್ಸಿನಲ್ಲಿ ನನ್ನದೂ ಪ್ರಮುಖ ಪಾತ್ರವಿದೆ ಎಂದು ಕಾಗವಾಡ ಶಾಸಕ ಮಾಜಿ ಸಚಿವ ಶ್ರೀಮಂತ ಬಾಳಾಸಾಬ ಪಾಟೀಲ್ ಹೇಳಿದರು.
ಅವರು ರವಿವಾರ ದಿ.೧೯ ರಂದು ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಸವನಗರದಲ್ಲಿ ತಳವಾರ ಸಮುದಾಯ ಏರ್ಪಡಿಸಿದ್ದ ಬೃಹತ್ ಜಾಗೃತಾ ಸಮಾವೇಶ ಹಾಗೂ ಸರ್ಕಾರಕ್ಕೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅವರು ಮುಂದೆ ಮಾತನಾಡುತ್ತಾ, ತಳವಾರ ಸಮುದಾಯಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾವು ಸದಾಕಾಲ ಸಿದ್ದವಿರುವದಾಗಿ ಹೇಳಿದ ಅವರು ಎಸ್ ಟಿ ಸಮುದಾಯಕ್ಕೆ ಸಿಗುವ ಸೌಲಭ್ಯಗಳನ್ನು ನೀವೆಲ್ಲರೂ ಪಡೆದುಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು. ನಿಮ್ಮ ಸೇವೆಗಾಗಿ ನಾನು ಸದಾಕಾಲ ಸಿದ್ದನಿರುವದಾಗಿ ಹೇಳಿದ ಅವರು ಈಗಾಗಲೇ ಉಗಾರ ಬುದ್ರುಕ್ ಗ್ರಾಮದಲ್ಲಿ ತಳವಾರ ಸಮುದಾಯಕ್ಕೆ ೧೫ ಲಕ್ಷ ರೂಪಾಯಿ ಮಂಜೂರಾತಿ ಪಡೆದುಕೊಂಡಿದ್ದು,ಮೋಳೆ ಗ್ರಾಮದವರಿಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವದಾಗಿ ಹೇಳಿದರು.ಒಂದು ವೇಳೆ ಸರ್ಕಾರದಿಂದ ಬರದೇ ಹೋದಲ್ಲಿ ನನ್ನ ಸ್ವಂತ ಹಣದಿಂದ ಸಮುದಾಯ ಭವನವನ್ನು ನಿರ್ಮಿಸಿಕೊಡುವದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡುತ್ತಾ, ತಳವಾರ ಸಮುದಾಯವನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಅನೇಕ ಎಡವು ತೊಡರುಗಳು ಉಂಟಾದರೂ ಕೂಡ ಸಮುದಾಯ ಮುಖಂಡರ ಅವಿರತ ಪರಿಶ್ರಮ ಹಾಗೂ ಮುಖ್ಯಮಂತ್ರಿ ಹಾಗೂ ಬಿಜೆಪಿ ಸರ್ಕಾರದ ಪ್ರಯತ್ನ ಮತ್ತು ಸಚಿವರು ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಪ್ರಯತ್ನದ ಫಲವಾಗಿ ತಳವಾರ ಸಮುದಾಯ ಎಸ್ ಟಿ ಪಂಗಡಕ್ಕೆ ಸೇರ್ಪಡೆಗೊಂಡಿತು.ಈ ಸರ್ಟಿಫಿಕೇಟ್ ತಗೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳದೇ ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ ಮಾತನಾಡಿ,ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ಸಮಾಜದಲ್ಲಿ ತಳವಾರ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ, ವಾಗಿ ತಳವೂರಲು ಈ ಪ್ರಮಾಣ ಪತ್ರ ಸಹಕಾರಿಯಾಗಲಿದೆ ಎಂದು ಹೇಳಿದ ಅವರು,ನಮ್ಮ ತಳವಾರ ಸಮುದಾಯ ಎಸ್ ಟಿ ಪ್ರಮಾಣ ಪತ್ರ ದೊರೆತ ಮೇಲೆ ಕರ್ನಾಟಕದಲ್ಲಿ 13 ಜನರು ವೈಧ್ಯಕೀಯ ಸೀಟು ಲಭಿಸಿವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.ಇನ್ನು ಮುಂದೆ ಇತರ ಒಳ ಪಂಗಡಗಳನ್ನು ಕೂಡ ಎಸ್ ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.ತಳವಾರ ಸಮುದಾಯದ ಜನರು ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಅನೇಕ ಮುಖಂಡರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಗವಾಡ ತಾಲ್ಲೂಕಾ ತಳವಾರ ಸಮುದಾಯದವರಿಂದ ಸರ್ಕಾರಕ್ಕೆ ಅಭಿನಂದನಾ ಸಮಾರಂಭದ ಅಂಗವಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,ಶಾಸಕ ಶ್ರೀಮಂತ ಪಾಟೀಲ್ ,ಹಾಗೂ ಈ ಕೆಲಸಕ್ಕೆ ಸಹಕರಿಸಿದ ಗಣ್ಯ ಮಾನ್ಯರನ್ನು ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದ ದಿವ್ಯ.ಸಾನಿಧ್ಯವನ್ನು ಹುನ್ನೂರಿನ ಕೊಣ್ಣೂರು ಮಠದ ಶ್ರೀ ವಿಶ್ವನಾಥ ಸ್ವಾಮೀಜಿ ವಹಿಸಿದ್ದರು.
ಈ ವೇಳೆ ಗಂಗಾರಾಮ ತಳವಾರ,ಸಿದ್ದರಾಮ ಜೇರಟಗಿ,ಶಿವರುದ್ರಪ್ಪ ತಳವಾರ,ದಿಲೀಪ ಕುರುಂದವಾಡೆ,ಶೀತಲ ಪಾಟೀಲ್, ಮೊದಲಾದ ಗಣ್ಯರು ವೇದಿಕೆ ಮೇಲಿದ್ದರು.
ಈ ಸಮಯದಲ್ಲಿ ಮಹದೇವ ಕೋಳಿ,ಸಿದರಾಯ ಹುಂಡೇಕರ,ಅಪ್ಪಾಸಾಬ ಸನದಿ,ಮನೋಹರ ಕೋಳಿ,ಅಶೋಕ ಕೋಳಿ,ವಿಠ್ಠಲ ಕೋಳಿ,ಪ್ರಕಾಶ ಅಪರಾಜ,ನಾಮದೇವ ಕೇರಿಕಾಯಿ,ಕುಮಾರ ಕೋಳಿ,ಉಮೇಶ ಕೋಳಿ,ರಾಮು ಕೋಳಿ,ಶ್ರೀನಿವಾಸ ಹುಂಡೇಕರ,ಸಂಜೀವ ಕೋಳಿ ಸೇರಿದಂತೆ ಅಥಣಿ ಹಾಗೂ ಕಾಗವಾಡ ತಾಲೂಕಿನ ತಳವಾರ ಸಮುದಾಯದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.