ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದಾಗ ಮಾತ್ರ ಹೆಸರು ಅಜರಾಮರ ಮುರಿಗೆಪ್ಪ ಮಾಲಗಾರ.

Share the Post Now

        ಮೂಡಲಗಿಯ ಲಯನ್ಸ್ ಎಜುಕೇಶನ್ ಸೊಸೈಟಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ ವಿ ಸೋನವಾಲಕರ್ ಪಬ್ಲಿಕ್ (CBSE) ಶಾಲೆ ಮತ್ತು ವಿ ಬಿ ಸೋನುವಾಲ್ಕರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶಿವರಾಮದಾದಾ ಕನ್ನಡ ಮಾಧ್ಯಮ ಶಾಲೆ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಪ್ರೇಮಿ ದಿವಂಗತ ಶ್ರೀ ವೀರಣ್ಣ ಈಶ್ವರಪ್ಪ ಹೊಸೂರ್ ಇವರ ದ್ವಿತೀಯ ಪುಣ್ಯಸ್ಮರಣೆ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ಹೊಸೂರ್ ಮತ್ತು ಕಾರ್ಯದರ್ಶಿಗಳಾದ ಶ್ರೀ ಶಿವು ವಿ ಹೊಸೂರ್ ವಹಿಸಿದ್ದರು.

ಕಾರ್ಯಕ್ರಮದ ನಿಮಿತ್ಯವಾಗಿ ವಿವಿಧ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ನಡೆದವು . ಶ್ರೀ ಬಿ ವಿ ಸೋನ್ವಾಲ್ಕರ್ ಪಬ್ಲಿಕ್ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಜನರು ಭಾಗವಹಿಸಿ ರಕ್ತದಾನ ಮಾಡಿದರು.   

                              ಇದೇ ರೀತಿ ಶಿವರಾಮದಾದಾ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಶಿಷ್ಯವೇತನ ನೀಡುವ ಯೋಜನೆಯಾದ ಪ್ರತಿಭಾ ಶೋಧ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಯಲ್ಲಿ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೈಕ್ಷಣಿಕ ಪ್ರಯೋಜನವನ್ನು ಪಡೆದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಅಜಿತ್ ಮನ್ನಿಕೇರಿ  ಮಾತನಾಡುತ್ತಾ ವ್ಯಕ್ತಿಯ ಶರೀರ ಸಹಜವಾಗಿ ನಶಿಸುತ್ತಾ ಬರುತ್ತದೆ, ಶರೀರ ನಶಿಸಿದ ನಂತರ ಉಳಿಯುವುದು ಅವರ ಶ್ರೇಷ್ಠ ಗುಣಗಳು, ವ್ಯಕ್ತಿ ಮಾಡಿದ ಪೂಜ್ಯನೀಯ ಕೆಲಸಗಳು ಭೂಮಿಯ ಮೇಲೆ ಸ್ಥಿರಸ್ಥಾಯಿಯಾಗಿ ಉಳಿಯಲು ಕಾರಣವಾಗುತ್ತವೆ. ಅಂತಹ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ದಿ. ವೀರಣ್ಣ ಹೊಸೂರ್ ಒಬ್ಬರು ಎಂದು ಹೇಳಿದರು.    

               ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಮುರಿಗೆಪ್ಪ ಮಾಲಗಾರ ಅವರು ಮಾತನಾಡಿ ದಿ ವೀರಣ್ಣ ಹೊಸೂರ್ ಅವರು ತಮ್ಮದೇ ಆದ ವಿದ್ಯಾ ಸಂಸ್ಥೆಗಳನ್ನು ಕಟ್ಟಿ  ಇಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಗುರಿಯೊಂದಿಗೆ ಗ್ರಾಮೀಣ ಭಾಗದಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ  ವಿದ್ಯಾ ಸಂಸ್ಥೆ ಕಟ್ಟಡ ನಿರ್ಮಿಸಿರುವುದು ಅವರ ಶೈಕ್ಷಣಿಕ ಪ್ರೇಮವನ್ನು ತೋರಿಸುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ಪಡೆಯಬೇಕೆಂದು ಹೇಳಿದರು.   

         ಪ್ರಧಾನ ಗುರುಗಳು ರಾಜು ತಳವಾರ ಮಾತನಾಡಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹದಾಯಕ ಶಿಕ್ಷಣ ನೀಡುವ ಸದುದ್ದೇಶದೊಂದಿಗೆ ಪ್ರತಿಭಾ ಶೋಧ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಒದಗಿಸಿರುತ್ತಾರೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕೆಂದು  ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಈರಣ್ಣ ಬೆಳಗಲಿ, ಶೇಖರ್ ಹೆಬ್ಬಳ್ಳಿ, ಬಿ ಕೆ ಡಾಂಗೆ, ಎಂ ಕೆ ಬಾಗವಾನ.ಹಾಗೂ ಶಿಕ್ಷಕಿಯರಾದ ನೀಲಾ ಬೆನ್ನಳ್ಳಿ, ಸುಕನ್ಯಾ ತೋಟಗಿ, ಸರಸ್ವತಿ ಬೆಳಕೂಡ ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀ ಎಸ್ ಪಿ ಸನ್ನಮೇತ್ರಿ ಅವರು ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!