ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆಯ ಅದ್ಧೂರಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

Share the Post Now

ಬೆಳಗಾವಿ.

ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲಾ ಪ್ರಾರಂಭೋತ್ಸವಕ್ಕೆ ತಹಶೀಲ್ದಾರ ಸುರೇಶ ಮುಂಜೆ ಚಾಲನೆ ನೀಡಿದರು.

ನಂತರ ಸಸಿಗೆ ನೀರುಣಿಸಿ ಮಾತನಾಡಿದ ಅವರು ನಾವೆಲ್ಲ ಸರಕಾರಿ ಶಾಲೆಗಳಲ್ಲಿ ಕಲಿತು ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದೇವೆ ಕಳೆದ ಒಂದು ದಶಕಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಅರ್ಹತೆ ಹೊಂದದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಆಟದ ಮೈದಾನ ವ್ಯವಸ್ಥೆ ಹೆಚ್ಚಿನ ಶುಲ್ಕ ಭರಿಸಿಕೊಂಡು ವಾಣಿಜ್ಯೋದ್ಯಮಗಳಾಗಿವೆ ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಅರ್ಹತೆ ಶಿಕ್ಷಕರು, ವಿವಿಧ ಮೂಲ ಸೌಲಭ್ಯ, ಬಿಸಿ ಊಟ, ಸಮವಸ್ತ್ರ, ಪುಸ್ತಕಗಳಂತಹ ಸೌಲಭ್ಯ ಒದಗಿಸುತ್ತಿದೆ ಶಿಕ್ಷಕರು ತೆರೆದ ಹೃದಯದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು ಪಾಲಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಮಕ್ಕಳ ಶೈಕ್ಷಣಿಕವಾಗಿ ಬೆಳಸುವ ಮೂಲಕ ಸರ್ಕಾರಿ ಶಾಲೆಗಳ ಭರವಸೆಯನ್ನು ಉಳಿಸಿಕೊಂಡಲ್ಲಿ, ಮತ್ತೆ ಸರ್ಕಾರಿ ಶಾಲೆಯತ್ತ ಮುಖ ಮಾಡುವಂತೆ ಮಾಡಬೇಕು ಎಂದರು.

ನಂತರ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು  ಮಾತನಾಡಿ 21 ನೇ ಶತಮಾನದ ಸವಾಲುಗಳಿಗೆ ಮಕ್ಕಳನ್ನು ಸಿದ್ಧಪಡಿಸುವುದು ಶಾಲೆಯ ಮುಖ್ಯ ಉದ್ದೇಶಕ್ಕಾಗಿ,  ಸರಕಾರ ಶಾಲೆಗಳಿಗೆ ಕಂಪ್ಯೂಟರ್,   ಟ್ರೈ-ಫೈ ಚಟುವಟಿಕೆ,  ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತಿವೆ ಎಂದರು.

ಪುರಸಭೆ ಅಧ್ಯಕ್ಷ ಹಮೀದ್ದಿನ ರೋಹಿಲೆ ಮಾತನಾಡಿದರು.

ನಂತರ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಿ ಶಾಲೆಯ ನಲಿಕಲಿ ಕೊಠಡಿ, ಕಂಪ್ಯೂಟರ್ ಲ್ಯಾಬ್ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎಸ.ಜಿ.ದೊಡಮನಿ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಪುರಸಭೆ ಸದಸ್ಯರಾದ ರಫೀಕಹ್ಮದ್ ರೋಹಿಲೆ, ಮೊಹಶೀನ್ ಮಾರುಫ, ಮಾಪಾಶಾ ಚಮನಶೇಖ, ಎಸ್ಡಿಎಂಸಿ ಅಧ್ಯಕ್ಷ ಜಹೂರ್ ರೋಹಿಲೆ, ಮುಖ್ಯೋಪಾಧ್ಯಾಯ ಮಹ್ಮದಲಿ ಪಟೇಲ, ಸಿಆರಸಿ ಇಕಬಾಲ ಉಮರಖಾನ್ ಮುಜಕ್ಕೀರ ಬಾಗೆ, ಅಬುಬಕರ ಪಟೇಲ್, ಮೇಲ್ಗಡೆ, ಮುಜಮ್ಮಿಲ್ ಪೀರ್ಜಾದೆ, ದೇವಾನಂದ್ ಮಾಡಲಗಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!