200ಕ್ಕೂ ಹೆಚ್ಚು ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ
ವರದಿ: ಸಂತೋಷ ಮುಗಳಿ
ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಸುಮಾರು ವರ್ಷಗಳ ಇತಿಹಾಸ ಇರುವ ಬನ್ನಿ ಮರಕ್ಕೆ ಮಾಹಾನವಮಿಯ ಅಮಾವಾಸ್ಯೆಯಿಂದ ಒಂಭತ್ತು ದಿನಗಳ ಕಾಲ ನಿರಂತರವಾಗಿ ನಸುಕಿನ ವೇಳೆ ಸುಮಾರು 4 ಗಂಟೆಯಿಂದ 7 ಗಂಟೆಯ ವರೆಗೆ ಬನ್ನಿ ಮರಕ್ಕೆ ಪ್ರತಿದಿನ ವಿವಿಧ ರೀತಿಯ ಹಾಗೂ ಉಂಡಿ ತುಂಬುವ ಮೂಲಕ ವಿಶಿಷ್ಟವಾದ ಪೂಜೆ ಸಲ್ಲಿಸಿದರು.
ಮಹಾನವಮಿಯ ಒಂಭತ್ತನೆಯ ದಿನದಂದು ಸುಮಾರು 200ಕ್ಕೂ ಹೆಚ್ಚು ಸುಮಂಗಲೆಯರು ಮತ್ತು ಯುವತಿಯರು ಮರಕ್ಕೆ ಪೂಜೆ ಸಲ್ಲಿಸಿ ಪರಸ್ಪರ ಉಡಿತುಂಬಿ ವಿಶೇಷವಾದ ಪೂಜೆ ಸಲ್ಲಿಸಿ ನಂತರ ಶ್ರೀಮಠದಲ್ಲಿ ಸ್ಥಾಪಿಸಿದ ಶ್ರೀ ನವದುರ್ಗೆಯ ಮೂರ್ತಿಗೆ ವಿಶಿಷ್ಟ ಅಲಂಕಾರ ಮಾಡಿ ದೇವಿಯ ಉಡಿ ತುಂಬಿ ಭಕ್ತಿಗೀತೆಗಳನ್ನು ಹಾಡಿ ವೃತಾಚರಣೆಗೆ ಮಂಗಲ ಹಾಡಿದರು.
ಈ ಸಂದರ್ಭದಲ್ಲಿ ಸುಮಂಗಲೆಯರಾದ ಲತಾ ಹುದ್ದಾರ ಸ್ನೇಹಾ ಮುಗಳಿ, ಶ್ವೇತಾ ಮುಗಳಿ, ಲಕ್ಷ್ಮೀ ಕರಿಭಿಮಗೋಳ, ಗೀತಾ ಬಾಗಾಯಿ, ಪಂಕಜಾ ಕುಲಕರ್ಣಿ, ಸುರೇಖಾ ಮಾಳಿಕಾರ, ರೂಪಾ ಮನಗೂಳಿ, ರಾಜಶ್ರೀ ನಾವಿ, ನಾಗವ್ವ ತೂಗದಲಿ, ಮಹಾನಂದಾ ತಳವಾರ ಹಾಗೂ ಶ್ರೀ ಮಠದ ಭಕ್ತರು ಇದ್ದರು.