ವರದಿ:ಡಾ. ಜಯವೀರ ಎ.ಕೆ.
ಖೇಮಲಾಪುರ
ರಾಯಬಾಗ: ಇತ್ತೀಚಿಗೆ ನಡೆದ ಇಲಾಖೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ “ತಾಲ್ಲೂಕು ಶಿಕ್ಷಣ ಸಂಯೋಜಕರಾಗಿ” ಮೊರಬ ಸರಕಾರಿ ಪ್ರೌಢಶಾಲೆಯ ಆದರ್ಶ ಶಿಕ್ಷಕರು, ಬಹುಮುಖ ಪ್ರತಿಭೆಯ ಶರಣ ವಿ ಎನ್ ತೇರದಾಳೆ ಅವರು ಆಯ್ಕೆಯಾಗಿದ್ದಾರೆ.
ಕಳೆದ 11 ವರುಷಗಳಿಂದ ಸಹಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ವಿ. ಎನ್ ತೇರದಾಳೆ ಅವರು ವೃತ್ತಿಯಿಂದ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಓರ್ವ ಉತ್ತಮ ಹಾರ್ಮೋನಿಯಂ ಕಲಾವಿದರು ಮಾತ್ರವಲ್ಲದೆ, ಅತ್ಯುತ್ತಮ ಗಾಯಕರಾಗಿಯೂ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಶಿಕ್ಷಣ ಸಂಯೋಜಕರಾಗಿ ಅಧಿಕಾರ ಸ್ವೀಕರಿಸಿದ ಶರಣ ವಿ. ಎನ್ ತೇರದಾಳೆ ಅವರನ್ನು ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಮಸ್ತ ಶಿಕ್ಷಕರು,ಕ. ಸಾ. ಪ ಅಧ್ಯಕ್ಷ ಆರ್ ಎಂ ಪಾಟೀಲ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ ಟಿ. ಎಸ್. ವಂಟಗೂಡಿ ಖೇಮಲಾಪುರದ ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಜಯವೀರ ಎ.ಕೆ. ಹಾಗೂ ತಾಲ್ಲೂಕಿನ ಎಲ್ಲ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.